ಮೋದಿ ಬಂಡವಾಳಶಾಹಿಗಳ ಕೈಗೊಂಬೆ: ನವಜೋತ್ ಸಿಂಗ್ ಸಿಧು

Update: 2018-11-23 17:45 GMT

ಚಿಂದ್ವಾರ, ನ. 23: ಪ್ರಧಾನಿ ನರೇಂದ್ರ ಮೋದಿ ಅವರು ಬಂಡವಾಳಶಾಹಿಗಳ ಕೈಗೊಂಬೆ ಎಂದು ಪಂಜಾಬ್‌ನ ಸಚಿವ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಗುರುವಾರ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ನವೆಂಬರ್ 28ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ನ ಚುನಾವಣಾ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

ಪ್ರಧಾನಿ ಅವರು ಬಂಡವಾಳಶಾಹಿಗಳ ಕೈಗೊಂಬೆ. ಅವರು ಸುಳ್ಳು ಹೇಳುತ್ತಿದ್ದಾರೆ. ರೈತರು 1 ಲಕ್ಷ ರೂ. ಸಾಲ ಪಾವತಿಸಲು ಬಾಕಿ ಇದ್ದರೆ, ಸರಕಾರ ಡೋಲು ಬಡಿದು ಪ್ರಚಾರ ಮಾಡುತ್ತದೆ. ಅದೇ ರೀತಿ ಸಾಲ ಬಾಕಿದಾರರಿಗೆ ಅವಮಾನ ಉಂಟು ಮಾಡಲು ಬ್ಯಾಂಕ್‌ನ ಅಧಿಕಾರಿಗಳು ಡೋಲು ಬಡಿದು ಪ್ರಚಾರ ಮಾಡುವ ಕ್ರಮಗಳನ್ನು ಕೈಗೊಳ್ಳುತ್ತಾರೆ. ಆದರೆ, ಅದಾನಿ, ಅಂಬಾನಿ 1.5 ಲಕ್ಷ ಕೋ.ರೂ. ಮರು ಪಾವತಿಸದೆ ಇದ್ದರೆ, ನೀವು ಅವರಿಗೆ ಅವಮಾನ ಮಾಡುವುದಿಲ್ಲ. ಮೋದಿ ಸರಕಾರ ಅದಾನಿ, ಅಂಬಾನಿಗೆ ಸೇರಿದ್ದೇ? ಎಂದು ಸಿಧು ಪ್ರಶ್ನಿಸಿದ್ದಾರೆ.

ರಫೇಲ್ ಜೆಟ್ ಫ್ರಾನ್ಸ್‌ನಿಂದ ಬರುವುದಾದರೆ, ಬುಲೆಟ್ ಟ್ರೈನ್ ಜಪಾನ್‌ನಿಂದ ಬರುವುದಾದರೆ, ಜನರು ಇಲ್ಲಿ ಮಾಡುವುದಾದರೂ ಏನು? ಅವರು ಪಕೋಡ ಕರಿಯಬೇಕಷ್ಟೇ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News