ವಿಜಯ್ ಮಲ್ಯ ಗಡಿಪಾರು: ನಾಳೆ ಲಂಡನ್‌ ನ್ಯಾಯಾಲಯದ ತೀರ್ಪು

Update: 2018-12-09 15:23 GMT

ಹೊಸದಿಲ್ಲಿ,ಡಿ.9: ವಿಜಯ್ ಮಲ್ಯಾರನ್ನು ಭಾರತಕ್ಕೆ ಗಡಿಪಾರು ಮಾಡುವ ಬಗ್ಗೆ ಲಂಡನ್‌ನ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯ ಸೋಮವಾರ ತೀರ್ಪು ನೀಡಲಿದ್ದು ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಉಪಸ್ಥಿರಿರುವ ಉದ್ದೇಶದಿಂದ ಸಿಬಿಐ ಜಂಟಿ ನಿರ್ದೇಶಕ ಎಸ್. ಸಾಯಿ ಮನೋಹರ್ ನೇತೃತ್ವದ ತಂಡ ರವಿವಾರ ಲಂಡನ್‌ಗೆ ತೆರಳಿದೆ. ಮಲ್ಯಾ ಕುರಿತ ವಿಚಾರಣೆಯಲ್ಲಿ ಈ ಹಿಂದೆ ಸಿಬಿಐ ವಿಶೇಷ ನಿರ್ದೇಶಕ ರಾಕೇಸ್ ಅಸ್ತಾನಾ ಭಾಗಿಯಾಗುತ್ತಿದ್ದರು. ಆದರೆ ಅವರನ್ನು ಸರಕಾರ ಕಡ್ಡಾಯ ರಜೆಯಲ್ಲಿ ಕಳುಹಿಸಿರುವ ಕಾರಣ ಅವರ ಸ್ಥಾನದಲ್ಲಿ ಮನೋಹರ್ ತೆರಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬಿಐ ಅಧಿಕಾರಿಯ ಜೊತೆ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳು ಕೂಡಾ ಲಂಡನ್‌ಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News