ಬಂಗಾಳಿ ಕವಿ ನಿರೇಂದ್ರನಾಥ್ ಇನ್ನಿಲ್ಲ

Update: 2018-12-25 17:14 GMT

ಕೋಲ್ಕತಾ, ಡಿ.25: ಪ್ರಸಿದ್ಧ ಬಂಗಾಳಿ ಕವಿ ನಿರೇಂದ್ರನಾಥ್ ಚಕ್ರವರ್ತಿ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

 ತೀವ್ರ ಉಸಿರಾಟದ ಸಮಸ್ಯೆ ಸೇರಿದಂತೆ ವೃದ್ಧಾಪ್ಯದ ಕಾಯಿಲೆಗಳಿಂದ ಬಳಲುತ್ತಿದ್ದ ಚಕ್ರವರ್ತಿ ಅವರನ್ನು ಡಿಸೆಂಬರ್ 9ರಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತೆಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಹೃದಯಾಘಾತಕ್ಕೀಡಾದ ಅವರು ಮಂಗಳವಾರ ಮಧ್ಯಾಹ್ನ 12:25ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಚಕ್ರವರ್ತಿ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 1924ರಲ್ಲಿ ಅವಿಭಜಿತ ಬಂಗಾಳದ ಫರೀದ್‌ಪುರದಲ್ಲಿ ಜನಿಸಿದ್ದ ನಿರೇಂದ್ರನಾಥ್ ಚಕ್ರವರ್ತಿ ಅವರು ಆಧುನಿಕ ಬಂಗಾಳಿ ಸಾಹಿತ್ಯ ಕ್ಷೇತ್ರದ ಅಗ್ರಗಣ್ಯರಲ್ಲೊಬ್ಬರಾಗಿದ್ದರು. ಅವರ ಪ್ರಪ್ರಥಮ ಕವನ ಸಂಕಲನ ‘ನಿಲ್ ನಿರ್ಜೊನೆ’ 1954ರಲ್ಲಿ ಪ್ರಕಟವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News