ಲಾಕ್‌ಡೌನ್‌ನಲ್ಲಿ ಧಾರ್ಮಿಕ ಸಮಾವೇಶಗಳು, ಮೆರವಣಿಗೆಗಳಿಗೆ ಅವಕಾಶ ಬೇಡ: ಕೇಂದ್ರ

Update: 2020-04-10 17:57 GMT

ಹೊಸದಿಲ್ಲಿ, ಎ.10: ಎಪ್ರಿಲ್ ತಿಂಗಳಿನಲ್ಲಿ ಹಬ್ಬಗಳು ಆಚರಿಸಲ್ಪಡುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಹಾಲಿ ಜಾರಿಯಲ್ಲಿರುವ 21 ದಿನಗಳ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಯಾವುದೇ ಸಾಮಾಜಿಕ ಅಥವಾ ಧಾರ್ಮಿಕ ಸಮಾವೇಶಗಳು ಮತ್ತು ಮೆರವಣಿಗೆಗಳಿಗೆ ಅವಕಾಶ ನೀಡದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶುಕ್ರವಾರ ಸೂಚಿಸಿದೆ.

ಯಾವುದೇ ಆಕ್ಷೇಪಾರ್ಹ ವಿಷಯದ ಪ್ರಸಾರದ ವಿರುದ್ಧ ಸಾಮಾಜಿಕ ಜಾಲತಾಣಗಳ ಮೇಲೆ ಸೂಕ್ತ ನಿಗಾ ಇರಿಸುವಂತೆಯೂ ಕೇಂದ್ರ ಗೃಹ ಸಚಿವಾಲಯವು ಸುತ್ತೋಲೆಯಲ್ಲಿ ತಿಳಿಸಿದೆ.

ಶಬೇ ಬಾರಾತ್ ಗುರುವಾರ ಆಚರಿಸಲ್ಪಟ್ಟಿದ್ದರೆ ಇಂದು ಗುಡ್ ಫ್ರೈಡೇ ಆಚರಿಸಲಾಗಿದೆ. ಬೈಸಾಕಿ, ರೋಂಗಲಿ ಬಿಹು, ವಿಷು, ಪೊಯಿಲಾ ಬೊಯಶಾಖ್, ಪುಥಂಡು, ಮಹಾ ವಿಷುಬಾ ಸಂಕ್ರಾಂತಿ ಇತ್ಯಾದಿ ಹಬ್ಬಗಳೂ ಎಪ್ರಿಲ್‌ನಲ್ಲಿ ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News