ಕೇರಳ: ಕೊರೋನ ವೈರಸ್‌ಗೆ 3ನೇ ಬಲಿ

Update: 2020-04-11 18:25 GMT

ತಿರುವನಂತಪುರಂ, ಎ.11: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕಣ್ಣೂರು ಜಿಲ್ಲೆಯ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಪುದುಚೇರಿ ಮೂಲದ 71 ವರ್ಷದ ವ್ಯಕ್ತಿ ಶನಿವಾರ ಮೃತಪಟ್ಟಿದ್ದು ಇದರೊಂದಿಗೆ ಕೇರಳದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3ಕ್ಕೆ ತಲುಪಿದೆ.

ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಪುದುಚೇರಿಯ ಮಾಹೆ ಮೂಲದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಬಳಿಕ ಕೊರೋನ ಸೋಂಕು ದೃಢಪಟ್ಟ ಕಾರಣ ಮಾರ್ಚ್ 27ರಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ವೈಫಲ್ಯದ ಕಾರಣ ಕಳೆದ 2 ವಾರದಿಂದ ವೆಂಟಿಲೇಟರ್ ಸಹಾಯ ಒದಗಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗುವ ಮುನ್ನ ಹಲವು ಕಾರ್ಯಕ್ರಮಗಳಲ್ಲಿ ಈತ ಪಾಲ್ಗೊಂಡಿರುವ ಮಾಹಿತಿಯಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಣ್ಣೂರು ಜಿಲ್ಲೆ ಪುದುಚೇರಿಯ ಮಾಹೆಗೆ ಸಮೀಪ ಇರುವುದರಿಂದ ಈ ವ್ಯಕ್ತಿ ಕಣ್ಣೂರಿನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ. ಈತನ ಅಂತ್ಯಸಂಸ್ಕಾರ ಸಂದರ್ಭ ಕೊರೋನ ಸಾವಿಗೆ ಸಂಬಂಧಿಸಿದ ಶಿಷ್ಟಾಚಾರಗಳನ್ನು ಪಾಲಿಸಲಾಗುವುದು ಎಂದು ಕಣ್ಣೂರು ಜಿಲ್ಲಾ ವೈದ್ಯಾಧಿಕಾರಿ ಕೆ ನಾರಾಯಣ ನಾಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News