ಮೌಂಟ್ ಎವರೆಸ್ಟ್ ಏರಿದ ಸಾಧಕಿಯ ಪದ್ಮಶ್ರೀ ಪ್ರಶಸ್ತಿಗೆ ಕನ್ನ ಹಾಕಿದರು!

Update: 2020-06-16 17:29 GMT

ಹೊಸದಿಲ್ಲಿ: ಮೌಂಟ್ ಎವರೆಸ್ಟ್ ಏರಿದ್ದ ಪರ್ವತಾರೋಹಿ ಪ್ರೇಮಲತಾ ಅಗರ್ ವಾಲ್ ಅವರ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿಯನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಅವರ ಪತಿ ವಿಮಲ್ ಅಗರ್ವಾಲ್ ಮಾಹಿತಿ ನೀಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಕಳ್ಳರು 20 ಸಾವಿರ ರೂ., 15 ಬೆಳ್ಳಿ ನಾಣ್ಯಗಳು , ಎರಡು ಕಂಪ್ಯೂಟರ್ ಗಳು ಮತ್ತು ಹಾರ್ಡ್  ಡಿಸ್ಕ್ ಗಳನ್ನು ಕದ್ದೊಯ್ದಿದ್ದಾರೆ.

“ಕಳೆದ ರಾತ್ರಿ ನನ್ನ ಮನೆಗೆ ನುಗ್ಗಿದ ಕಳ್ಳರು ನನ್ನ ಪತ್ನಿಯ ಪದ್ಮಶ್ರೀ ಪ್ರಶಸ್ತಿ , 20 ಸಾವಿರ ರೂ. ಮತ್ತು 15 ಬೆಳ್ಳಿ ನಾಣ್ಯಗಳು, ಕಂಪ್ಯೂಟರ್ ಮತ್ತು ಹಾರ್ಡ್ ಡಿಸ್ಕ್ ಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ" ಎಂದು ವಿಮಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News