ಗುಜರಾತ್: ಅಂಬೇಡ್ಕರ್ ಪ್ರತಿಮೆಗೆ ಅವಮಾನಿಸಿದ ದುಷ್ಕರ್ಮಿಗಳು
Update: 2020-07-13 15:27 GMT
ಭಾವನಗರ, ಜುಲೈ 13: ಗುಜರಾತ್ ನ ಭಾವನಗರ ಜಿಲ್ಲೆಯ ಸಿಹೋರ್ ಪಟ್ಟಣದಲ್ಲಿ ಸೋಮವಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅವಮಾನಿಸಲಾಗಿದೆ.
ದುಷ್ಕರ್ಮಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯ ತಲೆಯನ್ನು ಬಕೆಟ್ ನಿಂದ ಮುಚ್ಚಿದ್ದಾರೆ. ಪ್ರತಿಮೆಯ ಸಮೀಪ ಖಾಲಿ ಸಾರಾಯಿ ಸೀಸೆ ಇರಿಸಿದ್ದಾರೆ. ಮಧ್ಯರಾತ್ರಿ ಹಾಗೂ ಬೆಳಗ್ಗೆ 8 ಗಂಟೆ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಮೆಯನ್ನು ಅಪವಿತ್ರಗೊಳಿಸಿರುವುದನ್ನು ಬೆಳಗ್ಗೆ ಗಮನಿಸಿದ ಜನರು ಸಿಹೋರ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅನಂತರ ಜನರು ಪ್ರತಿಮೆಯನ್ನು ಸ್ವಚ್ಛಗೊಳಿಸಿದ್ದಾರೆ.