ನಾನು ಅಖಿಲೇಶ್ ಯಾದವ್ ಜೊತೆಗಿದ್ದೇನೆ: ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ

Update: 2022-03-26 09:51 GMT

ಲಕ್ನೊ: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ  ಸೋಲನುಭವಿಸಿದ್ದರೂ  ಆ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಜೊತೆಗಿದ್ದೇನೆ ಎಂದು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಅಧ್ಯಕ್ಷ ಜಯಂತ್ ಚೌಧರಿ ಹೇಳಿದ್ದಾರೆ.

“ಇಂಡಿಯಾ ಟುಡೆ’’ಯೊಂದಿಗೆ ವಿಶೇಷ ಸಂವಾದದಲ್ಲಿ ಮಾತನಾಡಿದ ಅವರು, ಅಖಿಲೇಶ್ ಯಾದವ್ ಅವರು ಲಕ್ನೋದಲ್ಲಿ ನೆಲೆಸುವ ಮೂಲಕ ಸಂಘಟನೆಯನ್ನು ಬಲಪಡಿಸುತ್ತಾರೆ.  ಇದು ಒಳ್ಳೆಯದು, ಅವರು ಜನರ ನಡುವೆ ಉಳಿಯುತ್ತಾರೆ ಹಾಗೂ  ಸಂಘಟನೆಯು ಬಲವಾಗಿರುತ್ತದೆ ಎಂದರು.

ಜಯಂತ್ ಚೌಧರಿ ಅವರು ಅಖಿಲೇಶ್ ಅವರನ್ನು ಭೇಟಿ ಮಾಡಲು ಪಕ್ಷದ ಕಚೇರಿಗೆ ತೆರಳಿದ್ದರು.

ಇದಲ್ಲದೆ, ಶಾಸಕರು ಕೆಲಸ ಮಾಡಲು ಸಿದ್ಧರಿದ್ದಾರೆ.  ಗೆಲ್ಲುವ ಎಲ್ಲಾ ಶಾಸಕರು ತಮ್ಮದೇ ಆದ ಐಡೆಂಟಿಟಿ ರೂಪಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News