ವಂಚನೆ ಆರೋಪ: ವ್ಯಾಪಮ್ ಹಗರಣ ಬಹಿರಂಗ ಮಾಡಿದ ವ್ಯಕ್ತಿಯ ಬಂಧನ‌

Update: 2022-04-08 18:11 GMT

ಹೊಸದಿಲ್ಲಿ, ಎ. 8: ವ್ಯಾಪಮ್ ಹಗರಣದ ಬಹಿರಂಗಗೊಳ್ಳಲು ಕಾರಣವಾಗಿದ್ದ ಡಾ. ಆನಂದ್ ರೈಯನ್ನು ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿಯ ಹೊಟೇಲೊಂದರಿಂದ ಮಧ್ಯಪ್ರದೇಶದ ಕ್ರೈಮ್ ಬ್ರಾಂಚ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ತನ್ನ ಬಂಧನವಾದ ಕೂಡಲೇ ಟ್ವೀಟ್ ಮಾಡಿದ ಡಾ. ರೈ, ಭೋಪಾಲಕ್ಕೆ ಬರುವಂತೆ ‘‘ಕಾರ್ಯಕರ್ತರು ಮತ್ತು ಹಿತೈಷಿಗಳನ್ನು’’ ಕೋರಿದ್ದಾರೆ. ಟ್ವೀಟ್‌ನಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್ ಮತ್ತು ವಿವೇಕ್ ಟಂಖಾರನ್ನು ಟ್ಯಾಗ್ ಮಾಡಿದ್ದಾರೆ.

ಮಧ್ಯಪ್ರದೇಶ ಶಿಕ್ಷಕ ಅರ್ಹತೆ ಪರೀಕ್ಷೆ (ಎಂಪಿ-ಟಿಇಟಿ)ಯ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಡಾ. ರೈ ಇತ್ತೀಚೆಗೆ ಬಹಿರಂಗಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News