ನಿರುದ್ಯೋಗ, ಭ್ರಷ್ಟಾಚಾರ, ಹಣದುಬ್ಬರ ಸಮಸ್ಯೆ ಇರುವ ತನಕವೂ ಹೋರಾಟ ಮುಂದುವರಿಸುವೆ: ವರುಣ್ ಗಾಂಧಿ

Update: 2022-08-22 07:22 GMT
Photo: PTI 

ಪಿಲಿಭಿತ್: ನಿರುದ್ಯೋಗ, ಭ್ರಷ್ಟಾಚಾರ ಹಾಗೂ  ಹಣದುಬ್ಬರ ಸಮಸ್ಯೆ (unemployment, corruption and inflation )ಇರುವ ತನಕವೂ  ಅದರ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಬಿಜೆಪಿ ಸಂಸದ ವರುಣ್ ಗಾಂಧಿ(Varun Gandhi) ರವಿವಾರ ಹೇಳಿದ್ದಾರೆ.

"ಈ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇರುವ ತನಕವೂ ಹಾಗೂ ನಿಮ್ಮ ಮಕ್ಕಳಿಗೆ ಕೆಲಸ ಸಿಗದವರೆಗೆ, ನನ್ನ "ಸಂಘರ್ಷ" (ಹೋರಾಟ) ಮುಂದುವರಿಯುತ್ತದೆ, ನಾವು ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ" ಎಂದು ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ನಮ್ಮ ಪೂರ್ವಜರ ತ್ಯಾಗ ವ್ಯರ್ಥವಾಗಲು ನಾವು ಬಿಡುವುದಿಲ್ಲ. ಮೂಲಭೂತ ಸಮಸ್ಯೆಗಳು, ಅನ್ಯಾಯ ಹಾಗೂ  ಭ್ರಷ್ಟಾಚಾರದ ವಿರುದ್ಧ ಜನರು ಧ್ವನಿ ಎತ್ತುವ ಸಮಯ ಬಂದಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:  'ನಮ್ಮ ಬದುಕು, ನಮ್ಮ ಊಟ, ನಮ್ಮ ಆಚರಣೆ': ಮಾಂಸಾಹಾರ ವಿವಾದ ಸೃಷ್ಟಿಗೆ ನೆಟ್ಟಿಗರ ಪ್ರತಿಕ್ರಿಯೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News