ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರನ್ನು ಹಾಡಿಹೊಗಳಿದ ಗ್ಯಾಂಗ್‌ಸ್ಟರ್

Update: 2022-10-21 06:37 GMT

#WATCH | "Yogi Adityanath is a brave, honest chief minister," says gangster Atiq Ahmed brought to CBI court in Lucknow pic.twitter.com/vLx7gWu1Ty

— ANI UP/Uttarakhand (@ANINewsUP) October 20, 2022

ಲಕ್ನೊ: ಗ್ಯಾಂಗ್‌ಸ್ಟರ್ ಕಮ್ ಮಾಜಿ ಸಂಸದ ಅತಿಕ್ ಅಹ್ಮದ್ ಗುರುವಾರ ಲಕ್ನೋದ ಸಿಬಿಐ ಕೋರ್ಟ್‌ಗೆ ತೆರಳುತ್ತಿರುವಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಹಾಡಿ ಹೊಗಳಿದ್ದಾನೆ. ಆದಿತ್ಯನಾಥ್ ಅವರು ಧೈರ್ಯಶಾಲಿ ಹಾಗೂ  ಪ್ರಾಮಾಣಿಕರು ಎಂದು ಅತಿಕ್ ಅಹ್ಮದ್ ಹೇಳಿದ್ದಾನೆ.

ವರದಿಗಳ ಪ್ರಕಾರ, ಅತಿಕ್ ಅಹ್ಮದ್ ನನ್ನು ಲಕ್ನೋದ ಸಿಬಿಐ ನ್ಯಾಯಾಲಯಕ್ಕೆ ಕರೆತರಲಾಯಿತು. ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್ ಅಹ್ಮದ್ , ಆದಿತ್ಯನಾಥ್ ಅವರನ್ನು ಹೊಗಳುತ್ತಿರುವುದು ಕಂಡುಬಂದಿದೆ.

ಆದಿತ್ಯನಾಥ್ ಅವರು ಅತ್ಯಂತ ಧೈರ್ಯಶಾಲಿ ಮತ್ತು ಪ್ರಾಮಾಣಿಕ ಮುಖ್ಯಮಂತ್ರಿ, ಎಂದು ಅತಿಕ್ ಅಹ್ಮದ್ ಪೊಲೀಸ್ ವಾಹನದೊಳಗೆ ಕುಳಿತುಕೊಂಡು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾನೆ.

ವರದಿಯ ಪ್ರಕಾರ, ಅತಿಕ್ ಅಹ್ಮದ್ ಹಾಗೂ  ಆತನ ಸಹೋದರ ಅಶ್ರಫ್  ಬಿಎಸ್ಪಿ ಶಾಸಕ ರಾಜು ಪಾಲ್ ಅವರನ್ನು ಜನವರಿ  25, 2005ರಲ್ಲಿ ಕೊಂದ ಆರೋಪ ಹೊತ್ತಿದ್ದಾರೆ ಮತ್ತು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News