ಜಾರ್ಖಂಡ್: ಬಸ್ ಗೆ ಬೆಂಕಿ, ಇಬ್ಬರ ಸಜೀವ ದಹನ

Update: 2022-10-25 15:25 GMT

ರಾಂಚಿ,ಅ.25: ಸೋಮವಾರ ಮಧ್ಯರಾತ್ರಿಯ ಸುಮಾರಿಗೆ ಇಲ್ಲಿಯ ಖಾದಗಡಾ ಬಸ್ ನಿಲ್ದಾಣ(Khadagada Bus Stand)ದಲ್ಲಿ ನಿಲ್ಲಿಸಲಾಗಿದ್ದ ಬಸ್ಸೊಂದಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ ಇಬ್ಬರು ಸಜೀವ ದಹನಗೊಂಡಿದ್ದಾರೆ.

ಬಸ್ ಚಾಲಕ ಮದನ ಮಹತೋ(Madana Mahato) (50) ಮತ್ತು ಕ್ಲೀನರ್ ಇಬ್ರಾಹಿಂ(Ibrahim) (25) ಮೃತ ವ್ಯಕ್ತಿಗಳಾಗಿದ್ದಾರೆ.

ಚಾಲಕ ಮತ್ತು ಕ್ಲೀನರ್ ಬಸ್ ನಲ್ಲಿ ನಿದ್ರಿಸಿದ್ದಾಗ ಈ ಅವಘಡ ಸಂಭವಿಸಿದೆ. ದೀಪಾವಳಿ ಪ್ರಯುಕ್ತ ಅವರು ಡ್ಯಾಷ್ ಬೋರ್ಡ್ ಮೇಲೆ ಮೋಂಬತ್ತಿಗಳನ್ನು ಹಚ್ಚಿರಿಸಿದ್ದಂತೆ ಕಂಡು ಬಂದಿದೆ. ಅವರು ಮದ್ಯದ ನಶೆಯಲ್ಲಿದ್ದಿರಬಹುದು, ಹೀಗಾಗಿ ಬಸ್ ಗೆ ಬೆಂಕಿ ಹತ್ತಿಕೊಂಡಿದ್ದನ್ನು ಗ್ರಹಿಸಲು ಸಾಧ್ಯವಾಗಿಲ್ಲ ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳವು ಸ್ಥಳವನ್ನು ತಲುಪುವಷ್ಟರಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿತ್ತು ಎಂದು ಪೊಲೀಸರು ತಿಳಿಸಿದರು. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್ ಅವರು ಈ ದುರಂತದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News