ಮ.ಪ್ರ:ಸಾಲದ ಹೊರೆಯಿಂದ ನೊಂದು ರೈತನ ಆತ್ಮಹತ್ಯೆ

Update: 2022-11-03 17:08 GMT

ಛಿಂದ್ವಾಡಾ,ನ.3: ಮಧ್ಯಪ್ರದೇಶದ ಛಿಂದ್ವಾಡಾ(Chhindwada) ಜಿಲ್ಲೆಯ ರಾಜೆಗಾಂವ (Rajegaon)ಗ್ರಾಮದಲ್ಲಿ ಬ್ಯಾಂಕ್ ಸಾಲವನ್ನು ತೀರಿಸಲು ಸಾಧ್ಯವಾಗದೆ ರೈತರೋರ್ವರು ಬುಧವಾರ ಸಂಜೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಅತಿವೃಷ್ಟಿಯಿಂದಾಗಿ ಬೆಳೆನಷ್ಟವನ್ನು ಅನುಭವಿಸಿದ್ದ ರಾಮಪತ್ ಚೌಧರಿ(Rampat Chaudhary) (54) ಸುಮಾರು ಮೂರು ಲ.ರೂ.ಗಳ ಬ್ಯಾಂಕ್ ಸಾಲವನ್ನು ತೀರಿಸಲಾಗದೆ ಪರದಾಡುತ್ತಿದ್ದರು. ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು,ಮುಂದಿನ ತನಿಖೆ ನಡೆಯುತ್ತಿದೆ ಎಂದರು.

ನಾಲ್ಕು ಎಕರೆ ಕೃಷಿಭೂಮಿಯನ್ನು ಹೊಂದಿದ್ದ ಚೌಧರಿ 2020ರಲ್ಲಿ 2.17 ಲ.ರೂ. ಮತ್ತು 2021ರಲ್ಲಿ 65,000 ರೂ.ಗಳ ಬ್ಯಾಂಕ್ ಸಾಲಗಳನ್ನು ಪಡೆದಿದ್ದರು ಎಂದು ಅವರ ಕುಟುಂಬವು ತಿಳಿಸಿದೆ.

Similar News