ಅರ್ನಾಬ್‌ ಗೋಸ್ವಾಮಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆದ ಮುಂಬೈ ಮಾಜಿ ಪೊಲೀಸ್ ಕಮಿಷನರ್

Update: 2022-12-14 15:24 GMT

ಮುಂಬೈ: ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ (Param Bir Singh) ಅವರು ಪತ್ರಕರ್ತ ಅರ್ನಾಬ್ ಗೋಸ್ವಾಮಿ (Arnab Goswami) ಮತ್ತು ರಿಪಬ್ಲಿಕ್ ಟಿವಿ (Republic TV) ಮಾಲೀಕತ್ವದ ಎಆರ್‌ಜಿ ಔಟ್ಲಿಯರ್ ಮೀಡಿಯಾ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಬುಧವಾರ ಹಿಂಪಡೆದಿದ್ದಾರೆ. 

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿ ಡಿ ಕೇದಾರ್ ಕೇಸ್ ವಾಪಸಾತಿಗೆ ಅನುಮತಿ ನೀಡಿದೆ. 

"ಬೇಷರತ್ತಾಗಿ ಮೊಕದ್ದಮೆಯನ್ನು ಹಿಂಪಡೆಯಲು ವೆಚ್ಚವನ್ನು ವಿಧಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಸಿಂಗ್ ಅವರು 2021 ರಲ್ಲಿ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿಯ ಮಾಲಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ತಮಗೆ ಮಾನಹಾನಿ ಮಾಡಿದ ಆರೋಪದ ಮೇಲೆ ರೂ. 90,00,000 ನಷ್ಟ ಪರಿಹಾರವನ್ನು ಕೋರಿದ್ದರು.

Similar News