ಪ್ರಧಾನಿಯವರ ಬಂಗಾಳದ ಕಾರ್ಯಕ್ರಮದಲ್ಲಿ ಹೈಡ್ರಾಮಾ, ವೇದಿಕೆ ಏರಲು ನಿರಾಕರಿಸಿದ ಮಮತಾ ಬ್ಯಾನರ್ಜಿ

Update: 2022-12-30 09:30 GMT

ಕೋಲ್ಕತ್ತಾ: ಬಂಗಾಳದ ಹೌರಾ ನಿಲ್ದಾಣದಲ್ಲಿ ಶುಕ್ರವಾರ ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ Mamata Banerjee ವೇದಿಕೆಗೆ ಬರಲು ನಿರಾಕರಿಸಿದ್ದರಿಂದ  ಹೈಡ್ರಾಮಾ ನಡೆಯಿತು.

ರೈಲ್ವೇ ನಿಲ್ದಾಣದಲ್ಲಿ ಆಹ್ವಾನಿತ ಜನಸಮೂಹದ ಒಂದು ಗುಂಪು  ಜೋರಾಗಿ ಘೋಷಣೆಗಳನ್ನುಕೂಗಿದ್ದರಿಂದ  ಮಮತಾ ಬ್ಯಾನರ್ಜಿ ಅಸಮಾಧಾನಗೊಂಡರು.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್  ಹಾಗೂ  ರಾಜ್ಯಪಾಲ ಸಿವಿ ಆನಂದ ಬೋಸ್ ಅವರು ಮಮತಾ ಬ್ಯಾನರ್ಜಿ ಅವರನ್ನು ಸಮಾಧಾನಪಡಿಸಲು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ.  ಬದಲಿಗೆ ಮುಖ್ಯಮಂತ್ರಿ ಬ್ಯಾನರ್ಜಿ ಸಭಿಕರ ಕುರ್ಚಿಯಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದರು.

ಹೌರಾ ಹಾಗೂ  ನ್ಯೂ ಜಲ್ಪೈಗುರಿಯನ್ನು ಸಂಪರ್ಕಿಸುವ ಪಶ್ಚಿಮ ಬಂಗಾಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್  ಹಾಗೂ  ಹಲವಾರು ಅಭಿವೃದ್ಧಿ ಯೋಜನೆಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ  ಉದ್ಘಾಟಿಸಿದರು.

Similar News