ಹಳಿ ತಪ್ಪಿದ ಮುಂಬೈ- ಜೋಧ್‌ಪುರ ರೈಲು

Update: 2023-01-02 03:26 GMT

ಪಾಲಿ, ರಾಜಸ್ಥಾನ: ರಾಜಸ್ಥಾನದ ಪಾಲಿ ಸಮೀಪ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲಿನ ಎಂಟು ಬೋಗಿಗಳು ಸೋಮವಾರ ನಸುಕಿನಲ್ಲಿ ಹಳಿ ತಪ್ಪಿದ ಘಟನೆ ವರದಿಯಾಗಿದೆ. ಮುಂಜಾನೆ 3.27ಕ್ಕೆ ಜೋಧ್‌ಪುರ ವಿಭಾಗದ ರಾಜ್‌ಕಿಯಾವಾಸ್-ಬೊಮಾರ್ಡಾ ಸೆಕ್ಷನ್‌ಗಳ ನಡುವೆ ಈ ದುರಂತ ಸಭವಿಸಿದೆ. ಮುಂಬೈನ ಬಾಂದ್ರಾ ಟರ್ಮಿನಸ್‌ನಿಂದ ಹೊರಟಿದ್ದ ರೈಲು ಜೋಧಪುರಕ್ಕೆ ತೆರಳುತ್ತಿತ್ತು.

ವಾಯವ್ಯ ರೈಲ್ವೆ ಮೂಲಗಳ ಪ್ರಕಾರ ಯಾವುದೇ ಸಾವು ನೋವು ಸಂಭವಿಸಿಲ್ಲ. ಅಪಘಾತ ಪರಿಹಾರ ರೈಲನ್ನು ಜೋಧ್‌ಪುರ ನಗರದಿಂದ ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ.

"ಉನ್ನತ ಅಧಿಕಾರಿಗಳು ಇಷ್ಟರಲ್ಲೇ ಘಟನಾ ಸ್ಥಳಕ್ಕೆ ತಲುಪಲಿದ್ದಾರೆ. ವಾಯವ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರು ಹಾಗೂ ಇತರ ಉನ್ನರ ಅಧಿಕಾರಿಗಳು ಜೈಪುರದಲ್ಲಿರುವ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಯಿಂದ ನಿಗಾ ಇರಿಸಿದ್ದಾರೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿವರಿಸಿದ್ದಾರೆ.

Similar News