ಆರೋಪಗಳು ಗಂಭೀರವಾಗಿದ್ದರೂ, ಕೆಲವೊಮ್ಮೆ ಉದ್ದೇಶ ಬೇರೆ ಆಗಿರುತ್ತದೆ: ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ

Update: 2023-01-21 11:48 GMT

 ಹೊಸದಿಲ್ಲಿ: ಕುಸ್ತಿ ಫೆಡರೇಷನ್‌ ಆಫ್‌ ಇಂಡಿಯಾದ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಸಹಿತ ಇತರ ಗಂಭೀರ ಆರೋಪಗಳನ್ನು ಹೊರಿಸಿ ದೇಶದ ಖ್ಯಾತ ಕುಸ್ತಿಪಟುಗಳು ರಾಜಧಾನಿಯಲ್ಲಿ ನಡೆಸಿದ ಪ್ರತಿಭಟನೆಯ ಬಗ್ಗೆ ಕೇಂದ್ರ ಸಚಿವ ವಿ ಕೆ ಸಿಂಗ್‌ ವಿವಾದಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

"ಕೆಲವೊಮ್ಮೆ ಆರೋಪಗಳು ಗಂಭೀರವಾಗಿರುತ್ತವೆ. ಕೆಲವೊಮ್ಮೆ ಗಂಭೀರ ಆರೋಪಗಳನ್ನು ಮಾಡಲಾಗುತ್ತದೆ. ಕೆಲವೊಮ್ಮೆ ಅದರ ಹಿಂದಿನ ಉದ್ದೇಶ ಬೇರೆ ಏನೋ ಆಗಿರುತ್ತದೆ. ಅದರ ಹಿಂದೆ ಏನಿದೆ ಎಂದು ತಿಳಿಯಿರಿ ಎಂದು ಅದಕ್ಕೆ ನಾನು ಹೇಳಿದ್ದು," ಎಂದು ಜಬಲ್ಪುರದಲ್ಲಿ ನಡೆದ ಸಂಸದ್‌ ಖೇಲ್‌ ಮಹೋತ್ಸವ್‌ನಲ್ಲಿ ಭಾಗವಹಿಸಲು ಬಂದಿದ್ದ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ.

Similar News