23 ಲಕ್ಷ ರೂ. ಬಿಲ್ ಬಾಕಿ ಇರಿಸಿ ದಿಲ್ಲಿ 5-ಸ್ಟಾರ್ ಹೋಟೆಲ್ ನಿಂದ ಪರಾರಿಯಾಗಿದ್ದ ವ್ಯಕ್ತಿ ಮಂಗಳೂರಿನಲ್ಲಿ ಬಂಧನ

Update: 2023-01-22 18:14 GMT

ಯುನೈಟೆಡ್ ಅರಬ್ ಎಮಿರೇಟ್ಸ್ ಸರಕಾರದ ಅಧಿಕಾರಿಯಂತೆ ಸೋಗು ಹಾಕಿ ರಾಷ್ಟ್ರ ರಾಜಧಾನಿಯ ಪಂಚತಾರಾ ಹೋಟೆಲ್ ನಲ್ಲಿ 23 ಲಕ್ಷ ರೂ.ಗೂ ಹೆಚ್ಚು ಮೊತ್ತದ ಬಾಕಿ ಬಿಲ್ ಪಾವತಿಸದೆ ಪರಾರಿಯಾಗಿದ್ದ ವ್ಯಕ್ತಿಯನ್ನು ಕರ್ನಾಟಕದಲ್ಲಿ ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಪುತ್ತೂರು ದರ್ಬೆ ನಿವಾಸಿ ಮೊಹಮ್ಮದ್ ಶರೀಫ್ (41) ಎಂದು ಹೆಸರಿಸಲಾಗಿದೆ. ಈತ ದಿಲ್ಲಿಯ ಲೀಲಾ ಪ್ಯಾಲೆಸ್ ಸ್ಟಾರ್ ಹೊಟೇಲ್‌ಗೆ 23 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಬಾಕಿ ಬಿಲ್ ಪಾವತಿಸದೇ ವಂಚಿಸಿ ಪರಾರಿಯಾದ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಶರೀಫ್ ಹೊಟೇಲ್‌ನ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದು, ಬಾಕಿ ಬಿಲ್‌ಗಳನ್ನು ಪಾವತಿಸದೆ ಹೋಟೆಲ್‌ಗೆ 23,46,413 ರೂ. ಮೌಲ್ಯದ ಅಪಾರ ನಷ್ಟ ಉಂಟಾಗಿದೆ.

ಘಟನೆಯ ನಂತರಹೋಟೆಲ್‌ನ ಜನರಲ್ ಮ್ಯಾನೇಜರ್  ಅನುಪಮ್ ದಾಸ್ ಗುಪ್ತಾ ಅವರು ನೀಡಿದ  ದೂರಿನ ಮೇರೆಗೆ ಪೊಲೀಸರು ಜನವರಿ 14 ರಂದು ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

Similar News