ಮೀಂ ಕವಿಗೋಷ್ಠಿ: ಕನ್ನಡ ಎಡಿಷನ್ ದಿನಾಂಕ ಘೋಷಿಸಿದ ಡಿಸಿಎಂ ಡಿಕೆ ಶಿವಕುಮಾರ್

Update: 2023-08-28 15:35 GMT

ಬೆಂಗಳೂರು: ಮಾರ್ಕಝ್ ನಾಲೆಡ್ಜ್ ಸಿಟಿಯಲ್ಲಿ ವಿರಾಸ್ ಆಯೋಜಿಸುತ್ತಿರುವ ಮೀಂ ಕವಿಗೋಷ್ಠಿಯ ಕನ್ನಡ ಲೋಗೋ ಮತ್ತು ದಿನಾಂಕವನ್ನು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದರು.

ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಮುಖಂಡರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಕವಿಗೋಷ್ಠಿಯ ಐದನೇ ಆವೃತ್ತಿಯು ಅಕ್ಟೋಬರ್ 7 ಮತ್ತು 8 ರಂದು ನಾಲೆಡ್ಜ್ ಸಿಟಿಯಲ್ಲಿ ನಡೆಯಲಿದೆ. 2019 ರಿಂದ ನಡೆಯುತ್ತಿರುವ ಮೀಂ ಕವಿಗೋಷ್ಠಿ ಈ ಬಾರಿ ಮಲಯಾಳಂ ಜೊತೆಗೆ ಕನ್ನಡ ಮತ್ತು ತಮಿಳು ಕಾವ್ಯಗಳಿಗೆ ಪ್ರತ್ಯೇಕ ಅಧಿವೇಶನಗಳನ್ನು ಆಯೋಜಿಸುತ್ತಿದೆ.

ಕವನಗಳನ್ನು ಕಳುಹಿಸಲು ಸೆಪ್ಟೆಂಬರ್ 15 ಕೊನೆಯ ದಿನಾಂಕ. ಇದನ್ನು meem@markazknowledgecity.com ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ಅತ್ಯುತ್ತಮ ಕವನಕ್ಕೆ ಜೂನಿಯರ್ ಮೀಮ್ ಪ್ರಶಸ್ತಿ 5000 ರೂ ಮತ್ತು ಫಲಕವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ +91 9945305313 ಅನ್ನು ಸಂಪರ್ಕಿಸಿ ಎಂದು ಸಂಘಟಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News