ವ್ಯಾಟಿಕನ್ ಸಿಟಿಯ ಪಾಪಲ್ ಹೌಸ್‌ನಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ಡಾ.ಆರತಿ ಕೃಷ್ಣ

Update: 2024-12-02 22:02 IST
ವ್ಯಾಟಿಕನ್ ಸಿಟಿಯ ಪಾಪಲ್ ಹೌಸ್‌ನಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ಡಾ.ಆರತಿ ಕೃಷ್ಣ
  • whatsapp icon

ಬೆಂಗಳೂರು : ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಅವರು ನ.30ರಂದು ವ್ಯಾಟಿಕನ್ ಸಿಟಿಯ ಪಾಪಲ್ ಹೌಸ್‌ನಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

ಶ್ರೀ ನಾರಾಯಣ ಧರ್ಮ ಸಂಗೊಂ ಟ್ರಸ್ಟ್ ವತಿಯಿಂದ ಈ ಸರ್ವ ಧರ್ಮ ಸಮ್ಮೇಳನವನ್ನು ಇಟಲಿ ದೇಶದ ವ್ಯಾಟಿಕನ್ ಸಿಟಿಯಲ್ಲಿ ಆಯೋಜಿಸಲಾಗಿದ್ದು, ಸರ್ವ ಧರ್ಮ ಸಮ್ಮೇಳನಕ್ಕೆ ಪ್ರಪಂಚದಾದ್ಯಂತ ವಿವಿಧ ಧರ್ಮಗಳ ಸಂತರು, ಧಾರ್ಮಿಕ ಮುಖಂಡರುಗಳು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಆರತಿ ಕೃಷ್ಣಾ, "ಪ್ರತಿ ಧರ್ಮವು ತನ್ನದೇ ಧಾರ್ಮಿಕ ನಂಬಿಕೆಗಳಲ್ಲಿ ದೃಢವಾಗಿರುತ್ತವೆಯಾದರೂ, ವಿಭಿನ್ನ ಧರ್ಮಗಳ ಪ್ರತಿನಿಧಿಗಳು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಉತ್ತಮ ಮಾನವೀಯತೆಯನ್ನು ನಿರ್ಮಿಸಬಹುದು. ಪ್ರಪಂಚದ ನಾನಾ ದೇಶಗಳಲ್ಲಿ ವಿವಿಧ ಕಾರಣಗಳಿಗೆ ತಮ್ಮ ಬದುಕು ಕಟ್ಟಿಕೊಂಡಿರುವ ಭಾರತೀಯರು ಒಂದಲ್ಲಾ ಒಂದು ರೀತಿ ಆಯಾ ರಾಷ್ಟ್ರ, ಆ ಭಾಗದಲ್ಲಿನ ಧರ್ಮಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ" ಎಂದು ತಿಳಿಸಿದರು.

"ಸಮ್ಮೇಳನದಲ್ಲಿ ಶ್ರೀ ನಾರಾಯಣ ಗುರುಗಳು ಮತ್ತು ಎಲ್ಲಾ ಧರ್ಮಗಳ ಧಾರ್ಮಿಕ ಗುರುಗಳು ಮತ್ತು ಪ್ರವಾದಿಗಳು ತೋರಿಸಿದ ಸಾಮರಸ್ಯ, ಸಹಾನುಭೂತಿ, ಗೌರವ ಮತ್ತು ಶಾಂತಿಯ ದೃಷ್ಟಿಯನ್ನು ನಾವು ಅಳವಡಿಸಿಕೊಳ್ಳಬೇಕು. ಹವಾಗುಣ ಬದಲಾವಣೆ, ಸಾಂಕ್ರಾಮಿಕ ರೋಗಗಳು, ಬಡತನ, ಸುಸ್ಥಿರ ಅಭಿವೃದ್ಧಿ, ಶಿಕ್ಷಣ ಇತ್ಯಾದಿಗಳಂತಹ ಮನುಕುಲ ಎದುರಿಸುತ್ತಿರುವ ಜಾಗತಿಕ ಸವಾಲುಗಳನ್ನು ನಾವು ಸಾಮೂಹಿಕವಾಗಿ ನಿಭಾಯಿಸಬಹುದು. ಆಗ ಮಾತ್ರ ನಾವು ನಮ್ಮ ಮಕ್ಕಳಿಗೆ ಉತ್ತಮವಾದ ಜಗತ್ತನ್ನು ಮಾಡಿಕೊಡಬಹುದು" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News