ಮುಂಗಾರು ಅಧಿವೇಶನ | ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ

Update: 2024-07-24 16:48 GMT

ಬೆಂಗಳೂರು : ಪರಿಷತ್ತಿನ ಅಧಿವೇಶನದಲ್ಲಿ ಮಹತ್ವದ ವಿಧೇಯಕಗಳು ಚರ್ಚೆಗೆ ಬರಲಿದ್ದು, ಸದನದಲ್ಲಿ ಹಾಜರಿರಲು ಕಾಂಗ್ರೆಸ್‌ನ ಸದಸ್ಯರಿಗೆ ‘ವಿಪ್’ ಜಾರಿ ಮಾಡಲಾಗಿದೆ.

ನಾಳೆ(ಜು.25) ಮತ್ತು ಜು.26ರಂದು ಅಧಿವೇಶನದ ಪ್ರಾರಂಭದಿಂದ ಮುಗಿಯುವವರೆಗೂ ಕಾಂಗ್ರೆಸ್ ಪಕ್ಷದ ಎಲ್ಲ ಸದಸ್ಯರು ಕಡ್ಡಾಯವಾಗಿ ಹಾಜರಿರಬೇಕು. ಕಾಂಗ್ರೆಸ್ ಸದಸ್ಯರು ಪರಿಷತ್ ಕಾರ್ಯ ಕಲಾಪಗಳ ಸಂದರ್ಭದಲ್ಲಿ ಪಾಲ್ಗೊಳ್ಳಬೇಕು ಎಂದು ಪರಿಷತ್ತಿನ ಸರಕಾರಿ ಮುಖ್ಯಸಚೇತಕ ಸಲೀಂ ಅಹ್ಮದ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News