ಫರಂಗಿಪೇಟೆ | ಹೆದ್ದಾರಿಗೆ ವಾಳಿದ್ದ ಬೃಹತ್ ಮರ ತೆರವು

Update: 2024-09-07 09:54 GMT

ಫರಂಗಿಪೇಟೆ : ರಾಷ್ಟ್ರೀಯ ಹೆದ್ದಾರಿ 73ರ ಫರಂಗಿಪೇಟೆ ವಾಣಿಜ್ಯ ಸಂಕೀರ್ಣವೊಂದರ ಎದುರು ಬೃಹತ್ ಮರವೊಂದು ಭಾರೀ ಗಾಳಿ ಮಳೆಗೆ ಬುಡದಿಂದಲೇ ವಾಳಿದ್ದು, ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ಇದರ ಕೊಂಬೆಗಳು ತಾಗಿ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು. ಈ ಸಂಬಂಧ ಪುದು ಗ್ರಾಮ ಪಂಚಾಯತ್ ನಿಯೋಗವು ಅಪಾಯದಲ್ಲಿದ್ದ ಮರಗಳನ್ನು ತೆರವುಗೊಳಿಸಲು ವಲಯ ಅರಣ್ಯ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿತ್ತು.

ಅದರಂತೆ ಅಪಾಯದಲ್ಲಿದ್ದ ಬೃಹತ್ ಮರವನ್ನು ಗ್ರಾಮ ಪಂಚಾಯತ್ ವತಿಯಿಂದ ಶನಿವಾರ ತೆರವುಗೊಳಿಸಲಾಯಿತು. 

ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇಕ್ಬಾಲ್ ಸುಜೀರ್, ಸದಸ್ಯರಾದ ರಜಾಕ್ ಅಮೆಮ್ಮಾರ್, ರಮ್ಲಾನ್ ಮಾರಿಪ್ಪಳ್ಳ, ನಝೀರ್ ಕುಂಜತ್ಕಳ, ಇಶಾಮ್ ಫರಂಗಿಪೇಟೆ ಮತ್ತಿತರರು ಸ್ಥಳದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News