ಮಂಗಳೂರು: ಇಂದು‌ ಕರ್ನಾಟಕ ಮುಸ್ಲಿಂ ಜಮಾಅತ್ ವೆಸ್ಟ್ ಜಿಲ್ಲಾ ಮಹಾಸಭೆ

Update: 2023-06-27 04:02 GMT

ಮಂಗಳೂರು: ಕರ್ನಾಟಕದಲ್ಲಿ ಮುಸ್ಲಿಮರ ಶೈಕ್ಷಣಿಕ, ಔದ್ಯೋಗಿಕ, ಧಾರ್ಮಿಕ, ಸಾಮಾಜಿಕ ‌ನಾಯಕರನ್ನೊಳಗೊಂಡ ಕರ್ನಾಟಕ ಮುಸ್ಲಿಂ ಜಮಾಅತ್ ನ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಸಮಿತಿಯ ಮಹಾಸಭೆಯು ಜೂ.27ರ ಸಂಜೆ 4ಕ್ಕೆ ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಪಾಝಿಲ್ ರಝ್ವಿ ಕಾವಲ್ ಕಟ್ಟೆ, ಪ್ರಧಾನ ಕಾರ್ಯದರ್ಶಿ ಮೌಲಾನಾ ಅಬೂಸುಫ್ಯಾನ್ ಇಬ್ರಾಹಿಮ್ ಮದನಿ,ಎಸ್ ಪಿ ಹಂಝ ಸಖಾಫಿ ಬಂಟ್ವಾಳ, ಪಿ ಪಿ ಅಹ್ಮದ್ ಸಖಾಫಿ, ಎಸ್ ಎಮ್ ರಷೀದ್ ಹಾಜಿ,ಬಿ ಎಂ ಮಮ್ತಾಝ್ ಅಲಿ,ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಐಸಂ ಸಾಕಿರ್ ಹಾಜಿ ಹಾಗೂ ವಿವಿಧ ಝೋನ್ ನಿಂದ ಆಯ್ಕೆ ಯಾದ ಕೌನ್ಸಿಲರ್ ಗಳು ಭಾಗವಹಿಲಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News