ಮುಲ್ಕಿ: ಸ್ಕೂಟರ್ ಗೆ ಢಿಕ್ಕಿ ಹೊಡೆದು ಟೆಂಪೋ ಚಾಲಕ ಪರಾರಿ; ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

Update: 2023-11-03 18:14 GMT

ಮುಲ್ಕಿ:ಇಲ್ಲಿಗೆ ಸಮೀಪದ ಕಾರ್ನಾಡ್ ಕೆಎಸ್ ರಾವ್ ನಗರ ಸಂಪರ್ಕ ರಸ್ತೆಯ ವನಭೋಜನ ಬಳಿ ಸ್ಕೂಟರ್ ಗೆ ಢಿಕ್ಕಿಯಾಗಿ ಪರಾರಿಯಾಗಿದ್ದ ಲೈನ್ ಸೇಲ್ ಟೆಂಪೋವನ್ನು ಸಾರ್ವಜನಿಕರು ಬೆನ್ನಟ್ಟಿ ಮಾನಂಪಾಡಿಯ ಕೆಂಪುಗುಡ್ಡೆ ಬಳಿ ಚಾಲಕ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಚಾಲಕನನ್ನು ಮಂಗಳೂರು ಯೆಯ್ಯಾಡಿ ಬಳಿಯ ನಿವಾಸಿ ಯತೀಶ್ ಎಂದು ಗುರುತಿಸಲಾಗಿದೆ.

ಆರೋಪಿ ಯತೀಶ್ ತಲಪಾಡಿ ಬೀರಿ ಬಳಿಯ ವೇಲು ಎಂಬವರ ಸಣ್ಣ ಕೈಗಾರಿಕಾ ಕಂಪನಿಯಲ್ಲಿ ಲೈನ್ ಸೇಲ್ಸ್ ಮತ್ತು ಚಾಲಕನಾಗಿ ಕೆಲಸಕ್ಕಿದ್ದು ಮುಲ್ಕಿ ಸಮೀಪದ ಕೆಎಸ್ ರಾವ್ ನಗರದಲ್ಲಿ ಲೈನ್ ಸೇಲ್ ಮುಗಿಸಿ ಮುಲ್ಕಿ ಕಡೆಗೆ ಬರುತ್ತಿರುವಾಗ ವನಭೋಜನ ಬಳಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದಾನೆ. ಈ ಸಂದರ್ಭ ಸ್ಕೂಟರ್ ಸವಾರೆ ಸ್ಥಳೀಯ ನಿವಾಸಿ ಚಿತ್ತರಂಜನಿ ಕಾಲಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಸಂದರ್ಭ ಅಪಘಾತ ನಡೆಸಿ ಪರಾರಿಯಾದ ಚಾಲಕ ಯತೀಶ್ ನನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆರೋಪಿ ಮದ್ಯ ಸೇವಿಸಿ ಚಾಲನೆ ಮಾಡುತ್ತಿದ್ದು ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದು ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News