ಬಾಂಗ್ಲಾದೇಶದಲ್ಲಿ ಹಿಂದೂಗಳ ಬೃಹತ್ ರ್ಯಾಲಿ
Update: 2024-10-26 16:30 GMT
ಢಾಕ : ಬಾಂಗ್ಲಾದೇಶದ ಹಿಂದೂಗಳು ಅಲ್ಪಸಂಖ್ಯಾತರ ಹಕ್ಕುಗಳಿಗೆ ಆಗ್ರಹಿಸಿ ಚಿತ್ತಗಾಂಗ್ನಲ್ಲಿ ಶುಕ್ರವಾರ ಬೃಹತ್ ರ್ಯಾಲಿ ನಡೆಸಿರುವುದಾಗಿ ವರದಿಯಾಗಿದೆ.
ಚಿತ್ತಗಾಂಗ್ನ ಐತಿಹಾಸಿಕ ಲಾಲ್ಡಿಘಿ ಮೈದಾನದಲ್ಲಿ `ಸನಾತನ ಜಾಗರಣ ಮಂಚ್' ಆಶ್ರಯದಲ್ಲಿ ನಡೆದ ರ್ಯಾಲಿಯಲ್ಲಿ ಸಾವಿರಾರು ಹಿಂದೂಗಳು ಪಾಲ್ಗೊಂಡು ಅಲ್ಪಸಂಖ್ಯಾತರ ಹಕ್ಕುಗಳು ಹಾಗೂ ಭದ್ರತೆಗಾಗಿ ಮಧ್ಯಂತರ ಸರಕಾರವನ್ನು ಆಗ್ರಹಿಸಿದರು.
ಅಲ್ಪಸಂಖ್ಯಾತರ ವಿರುದ್ಧದ ಅಪರಾಧಗಳಲ್ಲಿ ಭಾಗಿಯಾಗಿರುವವರನ್ನು ತ್ವರಿತವಾಗಿ ವಿಚಾರಣೆಗೆ ಒಳಪಡಿಸಲು ನ್ಯಾಯಮಂಡಳಿ ರಚನೆ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ರಚನೆ ಮುಂತಾದ 8 ಬೇಡಿಕೆಗಳನ್ನು ಮಧ್ಯಂತರ ಸರಕಾರ ಈಡೇರಿಸುವವರೆಗೆ ಸಾಮೂಹಿಕ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಹಿಂದೂ ಕಾರ್ಯಕರ್ತರ ಗುಂಪು ಹೇಳಿದೆ.