ವಿಶ್ವಸಂಸ್ಥೆ: ಗಾಝಾದಲ್ಲಿನ ಮಾನವೀಯ ಬಿಕ್ಕಟ್ಟನ್ನು ಖಂಡಿಸಿದ ಭಾರತ

Update: 2024-05-14 09:13 GMT

ರುಚಿರಾ ಕಂಬೋಜ್‌ | PC : PTI  

ಹೊಸದಿಲ್ಲಿ: ಇಸ್ರೇಲ್-ಹಮಾಸ್‌ ಯುದ್ಧಕ್ಕೆ ತನ್ನ ಬಲವಾದ ವಿರೋಧವನ್ನು ಭಾರತ ಮತ್ತೊಮ್ಮೆ ವ್ಯಕ್ತಪಡಿಸಿದೆ ಹಾಗೂ ಪೂರ್ಣ ಪ್ರಮಾಣದ ವಿಶ್ವ ಸಂಸ್ಥೆಯ ಸದಸ್ಯತ್ವಕ್ಕೆ ಫೆಲೆಸ್ತೀನ್‌ ಮಾಡುತ್ತಿರುವ ಪ್ರಯತ್ನಕ್ಕೆ ತನ್ನ ಬೆಂಬಲ ವ್ಯಕ್ತಪಡಿಸಿದೆ.

ವಿಶ್ವ ಸಂಸ್ಥೆಯಲ್ಲಿನ ಭಾತದ ಖಾಯಂ ಪ್ರತಿನಿಧಿ ರುಚಿರಾ ಕಂಬೋಜ್‌ ಅವರು ಗಾಝಾ ಸಂಘರ್ಷದಲ್ಲಿ ನಾಗರಿಕರ ಹತ್ಯೆಯನ್ನು ಖಂಡಿಸಿದರಲ್ಲದೆ ಅಂತರರಾಷ್ಟ್ರೀಯ ಕಾನೂನನನ್ನು ಎತ್ತಿಹಿಡಿಯಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಗಾಝಾಗೆ ಇನ್ನಷ್ಟು ಮಾನವೀಯ ಸಹಾಯ ಹರಿದು ಬರಬೇಕೆಂದೂ ಆಕೆ ಹೇಳಿದರು.

“ಈ ಸಂಘರ್ಷದ ಕುರಿತಂತೆ ಭಾರತದ ನಿಲುವನ್ನು ಅನೇಕ ಬಾರಿ ನಮ್ಮ ನಾಯಕತ್ವ ಒತ್ತಿ ಹೇಳಿದೆ. ಈ ಯುದ್ಧವು ದೊಡ್ಡ ಸಂಖ್ಯೆಯ ನಾಗರಿಕರ, ಮಹಿಳೆಯರ ಮಕ್ಕಳ ಸಾವಿಗೆ ಕಾರಣವಾಗಿದೆ, ಈ ಮಾನವೀಯ ಬಿಕ್ಕಟ್ಟು ಅಸ್ವೀಕಾರಾರ್ಹ. ಅಂತರರಾಷ್ಟ್ರೀಯ ಕಾನೂನನ್ನು ಎಲ್ಲರೂ ಎಲ್ಲಾ ಸನ್ನಿವೇಶಗಳಲ್ಲಿ ಗೌರವಿಸಬೇಕು,” ಎಂದು ಅವರು ಹೇಳಿದರು.

“ಫೆಲೆಸ್ತೀನಿ ಸ್ವತಂತ್ರ ದೇಶದಲ್ಲಿ ಸುಭದ್ರ ಗಡಿಯೊಳಗೆ ಜೀವಿಸುವಂತಾಗಲು ಎರಡು ರಾಷ್ಟ್ರಗಳ ಪರಿಹಾರವನ್ನು ಬೆಂಬಲಿಸುವ ನಿಟ್ಟಿನಲ್ಲಿ ಭಾರತ ಬದ್ಧವಾಗಿದೆ, ಆದಷ್ಟು ಬೇಗ ಶಾಂತಿ ಸಂಧಾನಗಳು ನಡೆಯಬೇಕೆಂಬುದು ನಮ್ಮ ಆಶಯ,” ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News