ರಾಮ ಮಂದಿರದ ʼಪ್ರಾಣ ಪ್ರತಿಷ್ಠಾಪನೆʼ ಗಾಗಿ ಅರ್ಧ ದಿನ ಮುಚ್ಚುವ ನಿರ್ಧಾರವನ್ನು ಹಿಂತೆಗೆದುಕೊಂಡ AIIMS

Update: 2024-01-21 06:08 GMT

Photo : NDTV

ಹೊಸದಿಲ್ಲಿ: ಭಾರೀ ಗದ್ದಲದ ನಡುವೆ, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ರಾಮ ಮಂದಿರದ ʼಪ್ರಾಣ ಪ್ರತಿಷ್ಠಾಪನೆʼ ಗಾಗಿ ಅರ್ಧ ದಿನ ಮುಚ್ಚುವ ನಿರ್ಧಾರವನ್ನು ಹಿಂತೆಗೆದುಕೊಂಡಿದೆ ಎಂದು ndtv ವರದಿ ಮಾಡಿದೆ.

ಅಯೋಧ್ಯೆ ರಾಮ ಮಂದಿರದಲ್ಲಿ ʼಪ್ರಾಣ ಪ್ರತಿಷ್ಠಾಪನೆʼ ಕಾರ್ಯಕ್ರಮಕ್ಕಾಗಿ ಸೋಮವಾರ ಜ.22ರ ಮಧ್ಯಾಹ್ನ 2.30 ರವರೆಗೆ ಹೊರ ರೋಗಿಗಳಿಗೆ ಸೇವೆಗಳನ್ನು ಮುಚ್ಚುವ ನಿರ್ಧಾರವನ್ನು AIIMS ಈ ಹಿಂದೆ ತಿಳಿಸಿತ್ತು ಎಂದು ತಿಳಿದು ಬಂದಿದೆ.

 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News