ಗುಜರಾತ್| ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಿನ್ನಮತ: ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

Update: 2024-04-01 11:11 GMT

ನಾರನ್ ಕಚ್ಚಾಡಿಯಾ | Photo Credit: X/@mpamreli

ಅಹಮದಾಬಾದ್: ಟಿಕೆಟ್ ಹಂಚಿಕೆ ವಿಚಾರದಲ್ಲಿ ಗುಜರಾತ್ ಬಿಜೆಪಿಯಲ್ಲಿ ಈ ಹಿಂದೆ ಎಂದೂ ಇಲ್ಲದಂಥ ಭಿನ್ನಮತ ಭುಗಿಲೆದ್ದಿದ್ದು, ಶನಿವಾರ ರಾತ್ರಿ ಆಡಳಿತಾರೂಢ ಬಿಜೆಪಿ ಕಾರ್ಯಕರ್ತರ ಎರಡು ಬಣಗಳ ನಡುವೆ ಪರಸ್ಪರ ಮಾರಾಮಾರಿ ನಡೆದಿರುವ ಘಟನೆ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡಲು ಬಿಜೆಪಿ ವಕ್ತಾರರು ನಿರಾಕರಿಸಿದ್ದಾರೆ. ಆದರೆ, ಪಕ್ಷದ ಕಾರ್ಯಕರ್ತರ ಗುಂಪುಗಳ ನಡುವೆ ನಿನ್ನೆ ರಾತ್ರಿ ಘರ್ಷಣೆ ನಡೆದಿದೆ ಎಂದು ಅಮ್ರೇಲಿಯ ಹಾಲಿ ಸಂಸದ ನಾರನ್ ಕಚ್ಚಾಡಿಯಾ Deccan Herald ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಹೀಗಿದ್ದೂ, ಈ ಘರ್ಷಣೆಗೂ, ಟಿಕೆಟ್ ಹಂಚಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಅಮ್ರೇಲಿಯ ಹಾಲಿ ಸಂಸದರಾದ ನಾರನ್ ಕಚ್ಚಾಡಿಯಾರ ಬದಲು ಅಮ್ರೇಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಭರತ್ ಸುತಾರಿಯಾಗೆ ಲೋಕಸಭಾ ಟಿಕೆಟ್ ನೀಡಿರುವುದಕ್ಕೆ ಸ್ಥಳೀಯ ಮಟ್ಟದ ಬಿಜೆಪಿ ಕಾರ್ಯಕರ್ತರಿಂದ ಭಾರಿ ಪ್ರತಿರೋಧ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News