ದಿಲ್ಲಿ ಪೊಲೀಸರು ನಮ್ಮನ್ನು ಅಪಹರಿಸಿದ್ದಾರೆ ಎಂದು ಟ್ವೀಟ್ ಮಾಡಿದ ಟಿಎಂಸಿ ಸಂಸದ ಸಾಕೇತ್ ಗೋಖಲೆ!

Update: 2024-04-08 13:41 GMT

Photo : hindustantimes.com

ಹೊಸದಿಲ್ಲಿ : ಚುನಾವಣಾ ಆಯೋಗದ ಕೇಂದ್ರ ಕಚೇರಿಯ ಮುಂದೆ ಕೇಂದ್ರ ತನಿಖಾ ದಳಗಳ ಮುಖ್ಯಸ್ಥರನ್ನು ತೆಗೆದುಹಾಕುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದ ಟಿಎಂಸಿಯ 5 ಹಾಲಿ ಸಂಸದರು, 4 ಮಾಜಿ ಸಂಸದರನ್ನು ಅಪಹರಿಸಿದ್ದಾರೆ ಎಂದು ಟಿಎಂಸಿ ಸಂಸದ ಸಾಕೇತ್ ಗೋಖಲೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿದ್ದಾರೆ.

ಟಿಎಂಸಿ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ ತಮ್ಮ ಪೋಸ್ಟ್ ನಲ್ಲಿ, “ ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಟಿಎಂಸಿಯ ನಾವು 5 ಮಂದಿ ಹಾಲಿ ಸಂಸದರು ಮತ್ತು 4 ಮಾಜಿ ಸಂಸದರನ್ನು ದಿಲ್ಲಿ ಪೊಲೀಸರು ಅಪಹರಿಸಿದ್ದಾರೆ. ಮೊದಲು ನಮ್ಮನ್ನು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುವುದು ಎಂದು ಹೇಳಿದರು. ನಂತರ, ಇದ್ದಕ್ಕಿದ್ದಂತೆ ನಾವಿದ್ದ ಬಸ್ಸನ್ನು ಬೇರೆಡೆಗೆ ತಿರುಗಿಸಲಾಗಿದೆ. ನಮ್ಮನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದಾರೆ. ಗಮನಿಸಿ - 5 ಹಾಲಿ ಸಂಸದರು ಮತ್ತು 4 ಮಾಜಿ ಸಂಸದರ ಮೇಲೆ ಹಲ್ಲೆ ಮಾಡಿ, ಬಂಧಿಸಲಾಗಿದೆ. ಇದೀಗ ಅಕ್ರಮವಾಗಿ ಯಾವುದೋ ಅಜ್ಞಾತ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ” ಎಂದು ತಿಳಿಸಿದ್ದಾರೆ. ಪೋಸ್ಟನ್ನು ಅವರು ದಿಲ್ಲಿ ಪೊಲೀಸ್ ಗೆ ಟ್ಯಾಗ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News