ರಣಜಿ | ಕರ್ನಾಟಕ - ಬಿಹಾರ ತಂಡದ 2ನೇ ದಿನದಾಟ ರದ್ದು

Update: 2024-10-27 15:58 GMT

PC l: PTI

ಪಾಟ್ನಾ : ಬಿಹಾರದ ರಾಜಧಾನಿಯಲ್ಲಿ ರಾತ್ರಿ ಇಡೀ ನಿರಂತರ ಮಳೆ ಸುರಿದ ಕಾರಣ ಮೈದಾನ ಒದ್ದೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ಬಿಹಾರದ ನಡುವೆ ರವಿವಾರ ಇಲ್ಲಿನ ಮೊಯಿನ್-ವುಲ್ ಹಕ್ ಕ್ರೀಡಾಂಗಣದಲ್ಲಿ ನಡೆಯಬೇಕಾಗಿದ್ದ ರಣಜಿ ಟ್ರೋಫಿಯ ಸಿ ಗುಂಪಿನ ಪಂದ್ಯದ 2ನೇ ದಿನದಾಟವು ರದ್ದಾಗಿದೆ.

ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡವು ಹಿಂದಿನ 2 ಪಂದ್ಯಗಳಲ್ಲಿ ಕೇವಲ 2 ಅಂಕ ಗಳಿಸಿದೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲಲೇಬೇಕಾದ ಹತಾಶ ಸ್ಥಿತಿಯಲ್ಲಿದೆ.

ವಿಷಾಹಾರ ಸೇವನೆಯಿಂದ ಬಳಲಿದ್ದ ನಾಯಕ ಮಯಾಂಕ್‌ಗೆ ಉತ್ತಮ ವಿಶ್ರಾಂತಿ ಲಭಿಸಿದಂತಾಗಿದೆ.

ಆತಿಥೇಯ ಬಿಹಾರದ 143 ರನ್‌ಗೆ ಉತ್ತರವಾಗಿ ಕರ್ನಾಟಕ ತಂಡ ಸೋಮವಾರ ವಿಕೆಟ್ ನಷ್ಟವಿಲ್ಲದೆ 16 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News