ಏಶ್ಯಕಪ್: ಭಾರತ-ಪಾಕ್ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ :ರೋಹಿತ್ ಬಳಗ 51/3

Update: 2023-09-02 11:13 GMT

Photo: Twitter

ಪಲ್ಲೆಕಲ್, ಸೆ.2: ಭಾರತ ಹಾಗೂ ಪಾಕ್ ನಡುವಿನ ಏಶ್ಯಕಪ್ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಗಿದ್ದು ರೋಹಿತ್ ಶರ್ಮಾ ಬಳಗವು 11.2 ಓವರ್ ಗಳಲ್ಲಿ 51 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಗಳನ್ನು ಕಳೆದುಕೊಂಡಿದೆ.

ಶನಿವಾರ ನಡೆದ ಗ್ರೂಪ್ ಎ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ರೋಹಿತ್ ಶರ್ಮಾ(11 ರನ್), ವಿರಾಟ್ ಕೊಹ್ಲಿ(4 ರನ್) ಹಾಗೂ ಶ್ರೇಯಸ್ ಅಯ್ಯರ್(14 ರನ್) ಪೆವಿಲಿಯನ್ ಹಾದಿ ಹಿಡಿದಿದ್ದಾರೆ. ಶುಭಮನ್ ಗಿಲ್ 24ಎಸೆತಗಳಲ್ಲಿ 6 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಶಾಹೀನ್ ಶಾ ಅಫ್ರಿದಿ(2-15) ಹಾಗೂ ಹಾರಿಸ್ ರವೂಫ್(1-18) ಮೂರು ವಿಕೆಟ್ ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News