ನಿರ್ಣಾಯಕ ಖನಿಜಗಳು ಮತ್ತು ಸುಸ್ಥಿರ ಭವಿಷ್ಯದೆಡೆಗೆ ಭಾರತದ ಹಾದಿ

Update: 2023-09-09 11:24 GMT

ಶ್ರೀ ಪ್ರಲ್ಹಾದ್ ಜೋಶಿ

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು

ನವದೆಹಲಿಯ ಜಿ20 ನಾಯಕರ ಶೃಂಗಸಭೆಗೆ ನಾವು ಹತ್ತಿರವಾಗುತ್ತಿರುವಾಗ, ಶುದ್ಧ ಇಂಧನದ ಪರಿವರ್ತನೆಯಲ್ಲಿ ನಿರ್ಣಾಯಕ ಖನಿಜಗಳ ಪ್ರಾಮುಖ್ಯತೆಯ ಬಗ್ಗೆ ಒಮ್ಮತ ಹೆಚ್ಚುತ್ತಿದೆ. ಗೋವಾದಲ್ಲಿ ನಡೆದ ಜಿ20 ಇಂಧನ ಪರಿವರ್ತನಾ ಸಚಿವರುಗಳ ಸಭೆಯ ಫಲಿತಾಂಶದ ದಾಖಲೆಯು ಅಂತಹ ನಿರ್ಣಾಯಕ ಖನಿಜಗಳು ಮತ್ತು ವಸ್ತುಗಳ ವಿಶ್ವಾಸಾರ್ಹ, ಜವಾಬ್ದಾರಿಯುತ ಮತ್ತು ಸುಸ್ಥಿರ ಪೂರೈಕೆ ಸರಪಳಿಗಳನ್ನು ನಿರ್ವಹಿಸುವ ಅಗತ್ಯವನ್ನು ಹೇಳುತ್ತದೆ. ಪ್ರಮುಖ ಉಪಯೋಗಗಳನ್ನು ಹೊಂದಿರುವ ಮತ್ತು ಯಾವುದೇ ಕಾರ್ಯಸಾಧ್ಯವಾದ ಬದಲಿಗಳನ್ನು ಹೊಂದಿರದ, ರಾಷ್ಟ್ರದ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಮುಖ್ಯವಾದ ಖನಿಜಗಳನ್ನು ಸಾಮಾನ್ಯವಾಗಿ ನಿರ್ಣಾಯಕ ಖನಿಜಗಳು ಎಂದು ವ್ಯಾಖ್ಯಾನಿಸಲಾಗುತ್ತದೆ. ಕೋಬಾಲ್ಟ್, ಲಿಥಿಯಂ, ಸಿಲಿಕಾನ್, ಗ್ರ್ಯಾಫೈಟ್ ಮತ್ತು ಅಪರೂಪದ ಭೂಮಿಯ ಅಂಶಗಳಂತಹ (ಆರ್ ಇಇ) ನಿರ್ಣಾಯಕ ಖನಿಜಗಳನ್ನು ಸೌರ ಫಲಕಗಳು, ಪವನ ಟರ್ಬೈನುಗಳು ಮತ್ತು ಬ್ಯಾಟರಿಗಳಂತಹ ಶುದ್ಧ ತಂತ್ರಜ್ಞಾನಗಳಲ್ಲಿ ಬಳಸಲಾಗುತ್ತದೆ. ಈ ತಂತ್ರಜ್ಞಾನಗಳ ನಿಯೋಜನೆಯು ಭಾರತದ ಸುಸ್ಥಿರ ಗುರಿಗಳಾದ 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ವಿದ್ಯುತ್ ಸಾಮರ್ಥ್ಯ ಮತ್ತು 2030ರ ವೇಳೆಗೆ 2005ರ ಮಟ್ಟಕ್ಕಿಂತ ಶೇ.45 ರಷ್ಟು ಹೊರಸೂಸುವಿಕೆ-ತೀವ್ರತೆಯನ್ನು ಕಡಿಮೆಮಾಡುವುದನ್ನು ಈಡೇರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಈ ಖನಿಜಗಳು ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಆಧುನಿಕ ನಾಗರಿಕತೆಯ ಮೂಲ ಘಟಕ (ಬಿಲ್ಡಿಂಗ್ ಬ್ಲಾಕ್ಸ್) ಎಂದು ಕರೆಯಬಹುದು.

ಶುದ್ಧ ತಂತ್ರಜ್ಞಾನಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ವಿವಿಧ ನಿರ್ಣಾಯಕ ಖನಿಜಗಳ ಜಾಗತಿಕ ಗಣಿಗಾರಿಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. 2016 ಮತ್ತು 2022 ರ ನಡುವೆ ಇಂಧನ, ಪರಿಸರ ಮತ್ತು ನೀರು ಕುರಿತ ಮಂಡಳಿ (ಸಿಇಇಡಬ್ಲ್ಯು) ಸಹಯೋಗದೊಂದಿಗೆ ಸಚಿವಾಲಯ ನಡೆಸಿದ ಅಧ್ಯಯನದ ಪ್ರಕಾರ, ಲಿಥಿಯಂ, ಆರ್ ಇ ಇ ಮತ್ತು ಕೋಬಾಲ್ಟ್ ನಂತಹ ಪ್ರಮುಖ ಖನಿಜಗಳ ವಾರ್ಷಿಕ ಉತ್ಪಾದನೆಯಲ್ಲಿ ಕ್ರಮವಾಗಿ ಶೇ. 240, ಶೇ. 134 ಮತ್ತು ಶೇ.67 ರಷ್ಟು ಹೆಚ್ಚಳವಾಗಿದೆ. ಕೋಬಾಲ್ಟ್, ತಾಮ್ರ ಮತ್ತು ನಿಕ್ಕೆಲ್‌ನಂತಹ ಖನಿಜಗಳ ವಿಷಯದಲ್ಲಿ, ಪ್ರಸ್ತುತ ಗಣಿ ಉತ್ಪಾದನೆಯು ಈಗಾಗಲೇ ಜಾಗತಿಕ ಮೀಸಲುಗಳ ಶೇಕಡಾ 2ಕ್ಕಿಂತ ಹೆಚ್ಚಿದೆ.

ಆದಾಗ್ಯೂ, ನಿರ್ಣಾಯಕ ಖನಿಜಗಳ ಜಾಗತಿಕ ಪೂರೈಕೆ ಸರಪಳಿಗಳು ಸಂಕೀರ್ಣವಾಗಿವೆ ಮತ್ತು ವ್ಯಾಪಾರ ಕಳಕಳಿಗಳು, ಭೌಗೋಳಿಕ-ರಾಜಕೀಯ ಅಂಶಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನಿರೀಕ್ಷಿತ ಅಡಚಣೆಗಳಿಗೆ ಗುರಿಯಾಗಬಹುದು. ನಮ್ಮ ಆಮದು ಅವಲಂಬನೆಯನ್ನು ಕಡಿಮೆ ಮಾಡಲು, ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ದೇಶೀಯ ಮೌಲ್ಯ ಸರಪಳಿಯನ್ನು ಅಭಿವೃದ್ಧಿಪಡಿಸಲು ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಯನ್ನು ಸುರಕ್ಷಿತಗೊಳಿಸುವುದು ಮುಖ್ಯವಾಗಿದೆ.

ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಮತ್ತಷ್ಟು ಹೆಚ್ಚಿಸಲು, ಪ್ರಧಾನ ಮಂತ್ರಿಯವರ ನೇತೃತ್ವದ ಸರಕಾರವು ಪರಿಶೋಧನೆ, ಸಂಸ್ಕರಣೆ, ಬಳಕೆ ಮತ್ತು ಮರುಬಳಕೆಯ ಮೇಲೆ ಕೇಂದ್ರೀಕರಿಸುವ ಮೂಲಕ ದೇಶೀಯ ನಿರ್ಣಾಯಕ ಖನಿಜಗಳ ವಲಯದ ಬೆಳವಣಿಗೆಗೆ ಬದ್ಧವಾಗಿದೆ.

2015, 2020, 2021 ಮತ್ತು ಇತ್ತೀಚೆಗೆ 2023ರಲ್ಲಿ ಪ್ರಮುಖ ಬದಲಾವಣೆಗಳ ಮೂಲಕ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957 ಕ್ಕೆ ನಿಯಮಿತ ತಿದ್ದುಪಡಿಗಳ ಮೂಲಕ ನೀತಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ದೇಶೀಯ ಉತ್ಪಾದನೆಯ ಮೂಲವನ್ನು ಹೆಚ್ಚಿಸಲು, ಗಣಿ ಸಚಿವಾಲಯವು 2015ರಲ್ಲಿ ಹೊಸ ಹರಾಜು ಪದ್ಧತಿಯನ್ನು ಆರಂಭಿಸಿತು. ಗಣಿಗಾರಿಕೆ ಪರವಾನಿಗೆಗಳು (ಎಂಎಲ್) ಮತ್ತು ಪಾರದರ್ಶಕ ಮತ್ತು ಸಮಯ-ನಿಗದಿತ ಪ್ರಕ್ರಿಯೆಯ ಮೂಲಕ ಗಣಿ ಅಭಿವೃದ್ಧಿಗಾಗಿ ಸಂಯೋಜಿತ ಪರವಾನಿಗೆಗಳನ್ನು (ಸಿಎಲ್) ನೀಡಿತು. ಇದಲ್ಲದೆ, ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್ (ಎನ್ ಎಂ ಇ ಟಿ) ನಿರ್ಣಾಯಕ ಖನಿಜಗಳ ಅನ್ವೇಷಣೆಯನ್ನು ಬೆಂಬಲಿಸುತ್ತಿದೆ ಮತ್ತು ಪರಿಶೋಧನಾ ಚಟುವಟಿಕೆಗಳಿಗೆ ಹಣವನ್ನು ಪಡೆಯಲು ಖಾಸಗಿ ಏಜೆನ್ಸಿಗಳನ್ನು ಸಹ ಪಟ್ಟಿ ಮಾಡಲಾಗಿದೆ. ಎಂಎಂಡಿಆರ್ ತಿದ್ದುಪಡಿ ಕಾಯ್ದೆ, 2023 ಆಳದ ಮತ್ತು ನಿರ್ಣಾಯಕ ಖನಿಜಗಳ ಪರಿಶೋಧನೆ ಪರವಾನಿಗೆಗಳನ್ನು (ಇಎಲ್) ಒದಗಿಸುವ ಮೂಲಕ ಗಣಿಗಾರಿಕೆಯನ್ನು ಸುಗಮಗೊಳಿಸುತ್ತದೆ. ಇದು 12 ಪರಮಾಣು ಖನಿಜಗಳ ಪಟ್ಟಿಯಿಂದ ಲಿಥಿಯಂ ಸೇರಿದಂತೆ 6 ಖನಿಜಗಳನ್ನು ಕೈಬಿಟ್ಟಿದೆ.

ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಒಂದು ಉದಾಹರಣೆಯಾಗಿ, ಆದಾಯವು ಸಂಬಂಧಪಟ್ಟ ರಾಜ್ಯ ಸರಕಾರಗಳಿಗೆ ಸೇರುವುದನ್ನು ಖಚಿತಪಡಿಸಿಕೊಂಡು 24 ನಿರ್ಣಾಯಕ ಖನಿಜಗಳಿಗೆ ಸಂಬಂಧಿಸಿದ ಹರಾಜು ಜವಾಬ್ದಾರಿಯನ್ನು ಸರಕಾರ ತೆಗೆದುಕೊಂಡಿದೆ, ಈ ಕ್ರಮವು ರಾಜ್ಯ ಸರಕಾರದ ಆದಾಯವನ್ನು ಸುಧಾರಿಸುತ್ತದೆ ಮತ್ತು ಅದರ ಹಣಕಾಸಿನ ಸ್ಥಿತಿಯು ಸುಧಾರಿಸಲು ಉತ್ತೇಜನವನ್ನು ನೀಡುತ್ತದೆ.

ದೇಶೀಯ ಕಾರ್ಯವಿಧಾನಗಳನ್ನು ಬಲಪಡಿಸುವುದರ ಹೊರತಾಗಿ, ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಯ ಮೂಲಕ ಸಹಯೋಗದ ಅಂತರ್‌ರಾಷ್ಟ್ರೀಯ ಪ್ರಯತ್ನಗಳು ನಿರ್ಣಾಯಕ ಖನಿಜಗಳ ಸ್ಥಿತಿಸ್ಥಾಪಕ ಮೌಲ್ಯ ಸರಪಳಿಯನ್ನು ನಿರ್ಮಿಸಲು ಸಹಾಯ ಮಾಡುತ್ತವೆ. ನಮ್ಮ ಗುರಿಗಳನ್ನು ಸಾಧಿಸಲು ಸಾಮೂಹಿಕ ಕ್ರಮವು ಮುಖ್ಯವಾಗಿದೆ ಮತ್ತು ಖನಿಜಗಳ ಭದ್ರತಾ ಪಾಲುದಾರಿಕೆ (ಎಂ ಎಸ್ ಪಿ), ಆಸ್ಟ್ರೇಲಿಯಾ-ಭಾರತ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇಸಿಟಿಎ) ಮತ್ತು ಚಿಲಿ ಮತ್ತು ಅರ್ಜೆಂಟೀನಾದಂತಹ ದೇಶಗಳಲ್ಲಿ ಖನಿಜ ಸ್ವಾಧೀನ ಅವಕಾಶಗಳನ್ನು ಪಡೆಯಲು ಖನಿಜ ಬಿದೇಶ್ ಇಂಡಿಯಾ ಲಿಮಿಟೆಡ್ (ಕೆಎಬಿಐಎಲ್) ಮೂಲಕ ನಿರ್ಣಾಯಕ ಖನಿಜಗಳಿಗೆ ಸಂಬಂಧಿಸಿದ ಹೊಸ ಪಾಲುದಾರಿಕೆಗಳು ಮತ್ತು ಮೈತ್ರಿಗಳನ್ನು ಸರಕಾರವು

ಸಕ್ರಿಯವಾಗಿ ರೂಪಿಸುತ್ತಿದೆ.

ಜಿ20 ರಲ್ಲಿ ಚರ್ಚಿಸಿದಂತೆ ನಿರ್ಣಾಯಕ ಖನಿಜಗಳ ಮೇಲಿನ ಸ್ವಯಂಪ್ರೇರಿತ ಉನ್ನತ ಮಟ್ಟದ ತತ್ವಗಳು, ನಾವೀನ್ಯತೆ, ಪರಿಸರ, ಸಾಮಾಜಿಕ ಮತ್ತು ಆಡಳಿತ (ಇಎಸ್‌ಜಿ) ಭವಿಷ್ಯದಲ್ಲಿ ಭಾರತದ ನಿರ್ಣಾಯಕ ಖನಿಜಗಳನ್ನು ಸುರಕ್ಷಿತಗೊಳಿಸುವ ನಮ್ಮ ಪ್ರಯತ್ನಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಭಾರತದ ಜಿ20 ಅಧ್ಯಕ್ಷತೆಯಲ್ಲಿ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಪ್ರಧಾನಮಂತ್ರಿಯವರ ದೃಷ್ಟಿಕೋನವು, ಹಂಚಿಕೆಯ ಭವಿಷ್ಯಕ್ಕಾಗಿ ಇಂಗಾಲ ಹೊರಸೂಸುವಿಕೆಯಲ್ಲಿ ಕಡಿತ ಮತ್ತು ಹವಾಮಾನ ಬದಲಾವಣೆ ತಗ್ಗಿಸುವಿಕೆಗೆ ಸಂಬಂಧಿಸಿದ ನಮ್ಮ ಹಂಚಿಕೆಯ ಗುರಿಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಭಾರತದ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಹಾಕಲಾದ ಅಡಿಪಾಯವು ಭಾರತದ ನಾಯಕತ್ವ ಪಾತ್ರದೊಂದಿಗೆ ನಿರ್ಣಾಯಕ ಖನಿಜಗಳ ಮೇಲಿನ ನಮ್ಮ ಕೆಲಸವನ್ನು ಬಲಪಡಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News