ಹಣಕಾಸು ಆಯೋಗದ ಪ್ರಥಮ ವರದಿ ರಾಜ್ಯಪಾಲರಿಗೆ ಸಲ್ಲಿಕೆ

Update: 2024-02-19 17:12 GMT

ಬೆಂಗಳೂರು: ಐದನೇ ರಾಜ್ಯ ಹಣಕಾಸು ಆಯೋಗದ 2024-25ನೆ ಸಾಲಿಗೆ ಸಂಬಂಧಿಸಿದ ಆಯೋಗದ ಪ್ರಥಮ ವರದಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಸೋಮವಾರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಮಹಮ್ಮದ್ ಸನಾ‌ ಉಲ್ಲಾ, ಆರ್.ಎಸ್.ಫೋಡೆ, ಆಯೋಗದ ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್ ಇದ್ದರು. ರಾಜ್ಯಪಾಲರು 2023ರ ಅಕ್ಟೋಬರ್ 11ರಂದು 5ನೆ ಹಣಕಾಸು ಆಯೋಗವನ್ನು ರಚಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News