ಅ.27: ಸರ್ಪಂಗಳ ಯಕ್ಷ ಪ್ರಶಸ್ತಿ ಪ್ರದಾನ

Update: 2024-10-25 15:24 GMT

ಉಡುಪಿ, ಅ.25: ಪ್ರತಿ ವರ್ಷದಂತೆ ಈ ಬಾರಿಯ ಸರ್ಪಂಗಳ ಯಕ್ಷೋತ್ಸವ ಕಾರ್ಯಕ್ರಮ ಅ.27ರ ರವಿವಾರ ಸಂಜೆ 4:00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ರಿಸರ್ಚ್ ಸೆಂಟರ್‌ನಲ್ಲಿ ಜರಗಲಿದೆ.

ಈ ಸಂದರ್ಭದಲ್ಲಿ ಸರ್ಪಂಗಳ ಪ್ರಶಸ್ತಿಯನ್ನು ಕಟೀಲು ಮೇಳದ ಭಾಗವತರಾದ ಪದ್ಯಾಣ ಗೋವಿಂದ ಭಟ್, ಸರ್ಪಂಗಳ ಪುರಸ್ಕಾರವನ್ನು ನೇಪಥ್ಯ ಕಲಾವಿದರಾಗಿ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಗೋವಿಂದ ನಾಯ್ಕ್ ಕಾಟುಕುಕ್ಕೆ ಇವರಿಗೆ ಪ್ರದಾನ ಮಾಡಲಾಗುವುದು.

ಬಳಿಕ ತೆಂಕುತಿಟ್ಟಿನ ಪ್ರಸಿದ್ಧಕಲಾವಿದರಿಂದ ಯಕ್ಷಗಾನ ‘ಕನಕಾಂಗಿ ಕಲ್ಯಾಣ’ ಪ್ರಸ್ತುತಗೊಳ್ಳಲಿದೆ ಎಂದು ಸರ್ಪಂಗಳ ಯಕ್ಷೋತ್ಸವದ ಪ್ರವರ್ತಕರಾದ ಡಾ. ಶೈಲಜಾ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News