ಬಿಬಿಸಿ ಮಾನ್ಸೂನ್ ಟ್ರೋಫಿ: ಎಸ್‌ಎಫ್‌ಸಿ ತಂಡಕ್ಕೆ ಪ್ರಶಸ್ತಿ

Update: 2024-08-21 11:52 GMT

ಬ್ರಹ್ಮಾವರ : ಬಿಬಿಸಿ ಸ್ಫೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ವಾರಂಬಳ್ಳಿಯ ನಾಗಬನ ಮೈದಾನದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಬಿಬಿಸಿ ಮಾನ್ಸೂನ್ ಕ್ರಿಕೆಟ್ ಟ್ರೋಫಿಯನ್ನು ಎಸ್‌ಎಫ್‌ಸಿ ಸಾಲೀಕೇರಿ ತಂಡ ಗೆದ್ದುಕೊಂಡಿದೆ. ಎಂ.ಎನ್‌ಎಂ ವಾರಂಬಳ್ಳಿ ತಂಡವನ್ನು ರನ್ನರ್ಸ್ ಪ್ರಶಸ್ತಿ ಪಡೆದು ಕೊಂಡಿದೆ.

ಪಂದ್ಯಾಟವನ್ನು ರಾಜೇಶ್ ಶೆಟ್ಟಿ ಬಿರ್ತಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ಯಾಮರಾಜ್ ಬಿರ್ತಿ, ವೆಂಕಟೇಶ್ ಭಟ್, ಎಸ್.ನಾರಾಯಣ ಬಿರ್ತಿ, ಗೋಡ್ವಿನ್ ಮೆನೇಜಸ್, ಸುಬ್ರಹ್ಮಣ್ಯ ಪ್ರಸಾದ್, ರೆಕ್ಸನ್, ಕಿಶನ್ ಕುಮಾರ್ ಉಪಸ್ಥಿತರಿದ್ದರು. ಲಿಂಗಪ್ ಕುಟ್ಟಿ ಸ್ವಾಗತಿಸಿದರು. ಶಶಿರಾಜ್ ವಂದಿಸಿದರು. ಜೆಸನ್ ನೇತೃತ್ವದಲ್ಲಿ ಲೀಗ್ ಮಾದರಿಯಲ್ಲಿ ನಡೆದ ಈ ಪಂದ್ಯಾಟದಲ್ಲಿ ಆರು ತಂಡಗಳು ಭಾಗವಹಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News