ಕೆಎಸ್‌ಸಿಎ ಕ್ರಿಕೆಟ್: ಮಂಗಳೂರು ವಲಯ ತಂಡದ ನಾಯಕರಾಗಿ ಅಶೀಷ್ ನಾಯಕ್

Update: 2023-08-07 13:40 GMT

ಅಶೀಷ್ ನಾಯಕ್

ಮಂಗಳೂರು, ಆ.7: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಇದೇ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಗ್ರಾಮಾಂತರ ಹಾಗೂ ಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುವ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಲಯ ತಂಡವನ್ನು ಆಯ್ಕೆ ಮಾಡಲಾಗಿದ್ದು, ಉಡುಪಿಯ ಆಶೀಷ್ ನಾಯಕ್ ತಂಡದ ನೇತೃತ್ವ ವಹಿಸಲಿದ್ದಾರೆ.

ತಂಡ ಹೀಗಿದೆ: ಆಶೀಷ್ ನಾಯಕ್ (ನಾಯಕ), ನಿಶ್ಚಿತ್ ಪೈ, ಪವನ್ ಮಡಿವಾಳ್, ನಿಖಿಲ್ ಐತಾಳ್, ರಿಷಬ್ ನಾಯಕ್ (ವಿಕೆಟ್‌ಕೀಪರ್), ಅಕ್ಷಯ್ ಕಾಮತ್ (ಎಲ್ಲರೂ ಉಡುಪಿ ಜಿಲ್ಲೆ), ರೋಹನ್ ರೇವಣ್ಕರ್, ಆದಿತ್ಯ ಕೋಟ್ಯಾನ್, ವಿರಾಲ್ ಕೋಟ್ಯಾನ್, ಅಮೃತ್ ಪ್ರವೀಣ್, ಅಡೇನ್ ಮಾರ್ಕ್ ಡಿಸೋಜ, ನಿಹಾಂಶ್, ಗಗನ್ ರಾವ್, ಪ್ರಥಮ್ (ಎಲ್ಲರೂ ದಕ್ಷಿಣ ಕನ್ನಡ ಜಿಲ್ಲೆ) ಹಾಗೂ ಶಾಶ್ವಿತ್ ಸೋಮಣ್ಣ (ಕೊಡಗು ಜಿಲ್ಲೆ).

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News