ಹುಲಿವೇಷ -ಜಾನಪದ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

Update: 2023-09-08 14:37 GMT

ಉಡುಪಿ : ಶ್ರೀಕೃಷ್ಣ ಜಯಂತಿ ಅಂಗವಾಗಿ ಹುಲಿವೇಷ ಮತ್ತು ಜಾನಪದ ತಂಡಗಳ ಸ್ಪರ್ಧೆಗಳಲ್ಲಿ ವಿಜೇತ ತಂಡಗಳಿಗೆ ಇಂದು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿತ್ತು.

ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ನೀಡಿದರು. ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ ಹಾಗೂ ಶಿರೂರು ಮಠಾಧೀಶ ಶ್ರೀವೇದ ವರ್ಧನತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ಹುಲಿ ವೇಷ ವಿಭಾಗದಲ್ಲಿ ಪ್ರಥಮ- ದರ್ಪಣ ಮಹಿಳಾ ತಂಡ, ದ್ವಿತೀಯ- ಅಲೆವೂರ್ ಶ್ರೀವಿಷ್ಣುಮೂರ್ತಿ ಸೇವಾ ಬಳಗ, ತೃತೀಯ- ಕುಂಜಾರುಗಿರಿ ಬಳಗ ಮತ್ತು ಜಾನಪದ ವಿಭಾಗದಲ್ಲಿ ಪ್ರಥಮ- ಸುಮನಾ ತಂಡ, ದ್ವಿತೀಯ- ಅಕ್ಷತಾ ತಂಡ ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News