2ಜಿ ಸ್ಪೆಕ್ಟ್ರಮ್ ಹಂಚಿಕೆ ಹಗರಣ ಪ್ರಕರಣ | ರಾಜಾ ದೋಷಮುಕ್ತಿ ಪ್ರಶ್ನಿಸುವ ಸಿಬಿಐ ಅರ್ಜಿಯ ನ್ನು ವಿಚಾರಣೆಗೆ ಅಂಗೀಕರಿಸಿದ ದಿಲ್ಲಿ ಹೈಕೋರ್ಟ್

Update: 2024-03-22 20:44 IST
2ಜಿ ಸ್ಪೆಕ್ಟ್ರಮ್ ಹಂಚಿಕೆ ಹಗರಣ ಪ್ರಕರಣ | ರಾಜಾ ದೋಷಮುಕ್ತಿ ಪ್ರಶ್ನಿಸುವ ಸಿಬಿಐ ಅರ್ಜಿಯ ನ್ನು ವಿಚಾರಣೆಗೆ ಅಂಗೀಕರಿಸಿದ ದಿಲ್ಲಿ ಹೈಕೋರ್ಟ್

 ದಿಲ್ಲಿ ಹೈಕೋರ್ಟ್ | Photo: PTI 

  • whatsapp icon

ಹೊಸದಿಲ್ಲಿ : 2ಜಿ ಸ್ಪೆಕ್ಟ್ರಮ್ ಹಂಚಿಕೆ ಹಗರಣ ಪ್ರಕರಣದಲ್ಲಿ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರ ದೋಷಮುಕ್ತಿಯನ್ನು ಪ್ರಶ್ನಿಸಿ ಸಿಬಿಯ ಸಲ್ಲಿಸಿರುವ ಮೇಲ್ಮನವಿಯನ್ನು ದಿಲ್ಲಿ ಹೈಕೋರ್ಟ್ ಶುಕ್ರವಾರ ವಿಚಾರಣೆಗೆ ಅಂಗೀಕರಿಸಿದೆ.

‘‘ದಾಖಲಿತ ಪುರಾವೆಗಳು, ಪ್ರಶ್ನಿಸಲ್ಪಟ್ಟಿರುವ ತೀರ್ಪು ಮತ್ತು ಉಭಯ ತಂಡಗಳು ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಗಳನ್ನು ಈ ನ್ಯಾಯಾಲಯವು ಪರಿಶೀಲಿಸಿದ್ದು, ಸಮಗ್ರ ಪುರಾವೆಗಳ ವಿವರವಾದ ಪರಿಶೀಲನೆಯ ಅಗತ್ಯವಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ’’ ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮ ಹೇಳಿದ್ದಾರೆ.

ಸಿಬಿಐಯು ಡಿಎಂಕೆ ನಾಯಕ ರಾಜಾರ ಖುಲಾಸೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಸುಮಾರು ಆರು ವರ್ಷಗಳ ಬಳಿಕ, ಅದನ್ನು ವಿಚಾರಣೆಗೆ ಅಂಗೀಕರಿಸಲಾಗಿದೆ.

2ಜಿ ಸ್ಪೆಕ್ಟ್ರಮ್ ಹಂಚಿಕೆ ಹಗರಣ ಪ್ರಕರಣದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸುವ ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ‘‘ಎದ್ದು ಕಾಣುವ ಲೋಪದೋಷಗಳಿವೆ’’ ಎಂಬುದಾಗಿ ಸಿಬಿಐ ತನ್ನ ಅರ್ಜಿಯಲ್ಲಿ ಹೇಳಿದೆ.

ಎ. ರಾಜಾ ಈಗ ತಮಿಳುನಾಡಿನ ನೀಲಗಿರಿಸ್ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ.

2017 ಡಿಸೆಂಬರ್ ನಲ್ಲಿ, ದಿಲ್ಲಿಯ ವಿಶೇಷ ನ್ಯಾಯಾಲಯವೊಂದು 2ಜಿ ಸ್ಪೆಕ್ಟ್ರಮ್ ಹಗರಣ ಪ್ರಕರಣದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು. ಡಿಎಂಕೆ ಸಂಸದೆ ಕನಿಮೋಳಿ, ಮಾಜಿ ಟೆಲಿಕಾಮ್ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ಮತ್ತು ರಾಜಾರ ಆಪ್ತ ಕಾರ್ಯದರ್ಶಿ ಆರ್.ಕೆ. ಚಂದೋಲಿಯ ಪ್ರಕರಣದ ಇತರ ಆರೋಪಿಗಳಾಗಿದ್ದರು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News