ನಿಮ್ಮ ಐಫೋನ್‌ ಅನ್ನು ʼಸರ್ಕಾರಿ ಪ್ರಾಯೋಜಿತ ದಾಳಿಕೋರರುʼ ಗುರಿ ಮಾಡಿರಬಹುದು: ಭಾರತದ ವಿಪಕ್ಷ ನಾಯಕರಿಗೆ ಆ್ಯಪಲ್‌ ಎಚ್ಚರಿಕೆ ಸಂದೇಶ

Update: 2023-10-31 06:52 GMT

ಮಹುವಾ ಮೊಯಿತ್ರಾ / ರಾಘವ್‌ ಛಡ್ಡಾ / ಸೀತಾರಾಂ ಯೆಚೂರಿ (Photo: PTI)

ಹೊಸದಿಲ್ಲಿ: ತಂತ್ರಜ್ಞಾನ ಕಂಪೆನಿ ಆ್ಯಪಲ್‌ ಮಂಗಳವಾರದಂದು ಭಾರತದ ಕನಿಷ್ಠ ಐದು ಮಂದಿ ವಿಪಕ್ಷ ನಾಯಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿ ಅವರ ಐಫೋನ್‌ಗಳು “ಸರ್ಕಾರ ಪ್ರಾಯೋಜಿತ ದಾಳಿಕೋರರಿಂದ” ಗುರಿಯಾಗಿರಬಹುದೆಂದು ತಾನು ನಂಬಿರುವುದಾಗಿ ತಿಳಿಸಿದೆ.

ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ, ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ, ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯ ಪವನ್‌ ಖೇರಾ ಮತ್ತು ಶಿವಸೇನೆಯ (ಉದ್ಧವ್‌ ಬಣ) ರಾಜ್ಯಸಭಾ ಸಂಸದೆ ಪ್ರಿಯಾಂಕ ಚತುರ್ವೇದಿ ಈ ಎಚ್ಚರಿಕೆ ಸಂದೇಶಗಳನ್ನು ಪಡೆದಿದ್ದಾರೆ.

ʼದಿ ವೈರ್‌ʼ ವರದಿ ಪ್ರಕಾರ ಅದರ ಸ್ಥಾಪಕ ಸಂಪಾದಕ ಸಿದ್ದಾರ್ಥ ವರದರಾಜನ್‌ ಹಾಗೂ ಆಪ್‌ ನಾಯಕ ರಾಘವ್‌ ಛಡ್ಡಾ ಅವರ ಫೋನ್‌ಗಳಿಗೂ ಈ ಸಂದೇಶ ಬಂದಿದೆ.

“ಸರ್ಕಾರ ಪ್ರವರ್ತಿತ ದಾಳಿಕೋರರಿಂದ ನಿಮ್ಮ ಸಾಧನ ದುರ್ಬಳಕೆಯಾದರೆ ಅವರು ನಿಮ್ಮ ಸೂಕ್ಷ್ಮ ಡೇಟಾ, ಸಂವಹನಗಳು, ಅಥವಾ ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗೆ ಕೂಡ ರಿಮೋಟ್‌ ಆಗಿ ಪ್ರವೇಶ ಪಡೆಯುವ ಸಾಧ್ಯತೆ ಇದೆ,” ಎಂದು ಸಂದೇಶದಲ್ಲಿ ಎಚ್ಚರಿಸಲಾಗಿದೆ.

ಟಿಎಂಸಿ ಸಂಸದೆ ಮಹುವಾ ತಮ್ಮ ಫೋನ್‌ಗೆ ಬಂದ ಎಚ್ಚರಿಕೆ ಸಂದೇಶದ ಚಿತ್ರ ಪೋಸ್ಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News