ಅಪ್ರಾಪ್ತ ವಯಸ್ಕನಿಂದ ಬಿಎಸ್‌ಪಿ ನಾಯಕನ ಗುಂಡಿಕ್ಕಿ ಹತ್ಯೆ

Update: 2024-03-05 15:35 GMT

ಭೋಪಾಲ್: ಬಿಎಸ್‌ಪಿ ನಾಯಕ ಮಹೇಂದ್ರ ಕುಮಾರ್ ಗುಪ್ತಾ ಅವರನ್ನು ಮಧ್ಯಪ್ರದೇಶದ ಛತರ್ಪುರ ಜಿಲ್ಲೆಯ ವಿವಾಹ ಸಮಾರಂಭವೊಂದರಲ್ಲಿ ಅಪ್ರಾಪ್ತ ವಯಸ್ಕನೊಬ್ಬನ ಗುಂಡೇಟಿಗೆ ಬಲಿಯಾಗಿದ್ದಾರೆ. ಆತ ರಾತ್ರಿ ಸುಮಾರು 9.30ರ ವೇಳೆಗೆ ಗುಪ್ತಾ ಅವರಿಗೆ ತೀರಾ ಸಮೀಪದಿಂದ ಗುಂಡಿಕ್ಕಿ, ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಗುಪ್ತಾ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಗುಪ್ತಾ ಅವರು 2923ರ ವಿಧಾನಸಭಾ ಚುನಾವಣೆಯಲ್ಲಿ ಛತ್ತರ್ಪುರ ಜಿಲ್ಲೆಯ ಬಿಜವಾರ್ ಕ್ಷೇತ್ರದಿಂದ ಸ್ಪರ್ಧಿಸಿ, ಪರಾಜಿತರಾಗಿದ್ದರು. ಮೂಲತಃ ಉತ್ತರಪ್ರದೇಶದವರಾದ ಅವರು ಬಿಎಸ್ಪಿಯ ಛತರ್ಪುರ ಜಿಲ್ಲೆಯ ಉಪಾಧ್ಯಕ್ಷ ಹಾಗೂ ಮಾಜಿ ಸರಪಂಚರು.

ಗುಪ್ತಾ ಅವರು ಮೂರು ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದರು. ಹಳೆಯ ವೈಷಮ್ಯವೇ ಗುಪ್ತಾ ಕೊಲೆಗೆ ಕಾರಣವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News