ಸಂಸತ್ ಅಧಿವೇಶನ ಮುಂದೂಡಿಕೆಗೆ ಹಿಂಡನ್‌ಬರ್ಗ್ ವರದಿ ಕಾರಣ?

Update: 2024-08-11 15:03 GMT

ಹಿಂಡನ್‌ಬರ್ಗ್ 

ಹೊಸದಿಲ್ಲಿ : ಹಿಂಡನ್‌ಬರ್ಗ್ ವರದಿ ಬಹಿರಂಗ ಹಾಗೂ ನಿಗದಿತ ದಿನಾಂಕಕ್ಕಿಂತ ಎರಡು ದಿನ ಮೊದಲೇ ಸಂಸತ್ ಅಧಿವೇಶನವನ್ನು ಮುಂದೂಡಿರುವುದಕ್ಕೂ ಪರಸ್ಪರ ಸಂಬಂಧವಿದೆಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಹ ವ್ಯಕ್ತಪಡಿಸಿದ್ದಾರೆ.

‘‘ಅಧಿವೇಶನದಲ್ಲಿ ಆಗಸ್ಟ್ 12ರ ಸಂಜೆಯವರೆಗೂ ಬೈಠಕ್ ನಡೆಸಬೇಕೆಂದು ಸಂಸತ್‌ಗೆ ಅಧಿಸೂಚನೆಯನ್ನು ನೀಡಲಾಗಿತ್ತು. ಆದರೆ ಹಠಾತ್ತನೆ ಆಗಸ್ಟ್ 9ರ ಮಧ್ಯಾಹ್ನದಂದೇ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇದಕ್ಕೆ ಕಾರಣವೇನು ಎಂಬುದು ಈಗ ನಮಗೆ ಗೊತ್ತಾಗಿದೆ’’ ಎಂದವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News