ಅಧಿಕೃತ ನಿವಾಸ ತೆರವುಗೊಳಿಸಲು ಮಹುವಾ ಮೊಯಿತ್ರಾಗೆ ಸೂಚನೆ: ವರದಿ

Update: 2023-12-12 10:25 GMT

ಮಹುವಾ ಮೊಯಿತ್ರಾ | Photo: PTI 

ಹೊಸದಿಲ್ಲಿ: ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಸದನದ ನೈತಿಕ ಸಮಿತಿಯ ಶಿಫಾರಸಿನಂತೆ ಲೋಕಸಭೆಯಿಂದ ಕಳೆದ ವಾರ ಉಚ್ಚಾಟಿಸಲ್ಪಟ್ಟ ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ಅವರು ಅತಿ ಶೀಘ್ರದಲ್ಲಿಯೇ ರಾಜಧಾನಿಯಲ್ಲಿರುವ ತಮ್ಮ ಅಧಿಕೃತ ನಿವಾಸ ತೆರವುಗೊಳಿಸಲು ಸೂಚಿಸಲಾಗಿದೆ India Today ವರದಿ ಮಾಡಿದೆ.

ಅಧಿಕೃತ ನಿವಾಸವನ್ನು ತೆರವುಗೊಳಿಸುವಂತೆ ಅವರಿಗೆ ಸೂಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ನಗರಾಭಿವೃದ್ಧಿ ಸಚಿವಾಲಯಕ್ಕೆ ಲೋಕಸಭೆಯ ಸದನ ಸಮಿತಿ ಪತ್ರ ಬರೆದಿದೆ.

ವಿಶೇಷ ಕೋಟಾದಡಿ ಸಚಿವಾಲಯವು ಮಹುವಾ ಅವರಿಗೆ ಅಧಿಕೃತ ನಿವಾಸ ಒದಗಿಸಿತ್ತು.

ಲೋಕಸಭೆಯಿಂದ ತಮ್ಮ ಉಚ್ಚಾಟನೆಯನ್ನು ಪ್ರಶ್ನಿಸಿ ಮಹುವಾ ಈಗಾಗಲೇ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News