ರತನ್ ಟಾಟಾ ಪ್ರೇಮ್ ಕಹಾನಿ | ಅವರು ಅವಿವಾಹಿತರಾಗಿಯೇ ಉಳಿದಿದ್ದೇಕೆ?

Update: 2024-10-10 15:56 GMT

ರತನ್ ಟಾಟಾ | PC : PTI 

ಮುಂಬೈ : ರತನ್ ಟಾಟಾ ಈ ಜಗತ್ತನ್ನು ಬಿಟ್ಟು ಹೋಗಿದ್ದಾರೆ. ಆದರೆ ಅವರು ಭಾರತೀಯರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಲಿದ್ದಾರೆ. ಅವರು ಮಹಾನ್ ಉದ್ಯಮಿ ಮಾತ್ರವಲ್ಲ, ರಾಷ್ಟ್ರಕ್ಕಾಗಿ ತನ್ನ ಜವಾಬ್ದಾರಿಗಳನ್ನೂ ಅತ್ಯುತ್ತಮವಾಗಿ ನಿರ್ವಹಿಸಿದ್ದರು. ಇಂದು ಅವರ ವೈಯಕ್ತಿಕ ಜೀವನದ ಬಗ್ಗೆ,ವಿ ಶೇಷವಾಗಿ ಅವರ ಕುಟುಂಬದ ಬಗ್ಗೆ ಎಲ್ಲರಲ್ಲಿಯೂ ಕುತೂಹಲ ಗರಿಗೆದರಿದೆ.

ರತನ್ ಟಾಟಾ ಎಂದೂ ಮದುವೆ ಆಗಿರಲಿಲ್ಲ. ತನ್ನ ಬದುಕಿನುದ್ದಕ್ಕೂ ಅವರು ದೇಶದ ಪ್ರಗತಿ ಮತ್ತು ಇತರರ ಯೋಗಕ್ಷೇಮಕ್ಕೆ ಸಮರ್ಪಿತರಾಗಿದ್ದರು. ಅವರು ಭಾರತದ ಮಾತ್ರವಲ್ಲ, ಇಡೀ ಜಗತ್ತಿನ ಜನರಿಗೆ ಆದರ್ಶಪ್ರಾಯರಾಗಿದ್ದರು. ಇಂತಹ ರತನ್ ಟಾಟಾ ಹೇಳಿಕೊಂಡಿದ್ದ ಅವರ ಪ್ರೇಮ್ ಕಹಾನಿ ಇಲ್ಲಿದೆ.

ರತನ್ ಟಾಟಾ ಬಳಿ ಎಲ್ಲವೂ ಇತ್ತು. ಆದರೆ ಒಂದು ವಿಷಾದ ಮಾತ್ರ ಅವರಲ್ಲಿ ತುಂಬಿಕೊಂಡಿತ್ತು. ತನ್ನ ಮ್ಯಾನೇಜರ್ ಶಂತನುವಿನ ಸ್ಟಾರ್ಟ್‌ಪ್ ‘ಗುಡ್‌ಫೆಲೋಸ್’ ಆರಂಭದ ಸಂದರ್ಭದಲ್ಲಿ ಅವರು ಅದನ್ನು ಉಲ್ಲೇಖಿಸಿದ್ದರು.

‘ಒಬ್ಬಂಟಿಯಾಗಿರುವುದು ಏನು ಎನ್ನುವುದು ನಿಮಗೆ ತಿಳಿದಿಲ್ಲ. ನೀವು ಸಮಯವನ್ನು ನಿಮ್ಮೊಂದಿಗೇ ಕಳೆಯಬೇಕಾದ ಅನಿವಾರ್ಯಕ್ಕೆ ಸಿಲುಕುವವರೆಗೂ ಅದು ನಿಮಗೆ ಅರ್ಥವಾಗುವುದಿಲ್ಲ ’ಎಂದು 85ರ ಬ್ಯಾಚುಲರ್ ರತನ್ ಟಾಟಾ ಹೇಳಿದ್ದರು.

ರತನ್ ಬ್ಯಾಚಲರ್ ಆಗಿದ್ದರೂ ಅವರದೂ ಒಂದು ಲವ್ ಸ್ಟೋರಿಯಿತ್ತು ಮತ್ತು ಅದು ಅಪೂರ್ಣವಾಗಿಯೇ ಉಳಿದಿತ್ತು. ಲಾಸ್ ಏಂಜೆಲ್ಸ್‌ನಲ್ಲಿ ಕೆಲಸ ಮಾಡುತ್ತಿರುವಾಗ ಅವರು ಓರ್ವ ಯುವತಿಯೊಂದಿಗೆ ಪ್ರೇಮದಲ್ಲಿ ಬಿದ್ದಿದ್ದರು ಮತ್ತು ಆಕೆಯನ್ನು ಮದುವೆ ಆಗುವ ಸನಿಹದಲ್ಲಿಯೂ ಇದ್ದರು. ಆದರೆ ತನ್ನ ಅಜ್ಜಿಯ ಅನಾರೋಗ್ಯದಿಂದಾಗಿ ಡಿಢೀರ್ ತಿರುವು ಪಡೆದುಕೊಂಡ ಘಟನಾವಳಿಗಳಿಂದಾಗಿ ಅವರು ಭಾರತಕ್ಕೆ ಮರಳುವಂತಾಗಿತ್ತು. ತಾನು ಪ್ರೇಮಿಸಿದ್ದ ಯುವತಿಯೂ ತನ್ನೊಂದಿಗೆ ಭಾರತಕ್ಕೆ ಬರುತ್ತಾಳೆ ಎಂದು ಅವರು ನಂಬಿದ್ದರು. ಆದರೆ ಅವರೇ ವಿವರಿಸಿರುವಂತೆ ‘1962ರ ಭಾರತ-ಚೀನಾ ಯುದ್ಧದಿಂದಾಗಿ ಆಕೆ ಭಾರತಕ್ಕೆ ತೆರಳಲು ಆಕೆಯ ಹೆತ್ತವರು ಅನುಮತಿಸಿರಲಿಲ್ಲ ಮತ್ತು ಪ್ರೇಮ ಸಂಬಂಧ ಅಲ್ಲಿಗೆ ಅಂತ್ಯಗೊಂಡಿತ್ತು’.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News