ಜಾರ್ಖಂಡ್ | ರಸ್ತೆ ಗುಂಡಿಯಲ್ಲಿ ಸಿಕ್ಕಿಕೊಂಡ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕಾರು

Update: 2024-09-23 16:46 GMT

 ಶಿವರಾಜ್ ಸಿಂಗ್ ಚೌಹಾಣ್ | PTI

ಬಹರಾಗೋರ : ಸೋಮವಾರ ಜಾರ್ಖಂಡ್ ನ ಪೂರ್ವ ಜಿಲ್ಲೆಯಾದ ಸಿಂಗ್ ಭುಮ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಕಾರು ರಸ್ತೆ ಗುಂಡಿಯಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಹರಾಗೋರಾದಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶಿವರಾಜ್ ಸಿಂಗ್ ಚೌಹಾಣ್, ಹೆಲಿಪ್ಯಾಡ್ ಗೆ ಮರಳುವಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಭಾರಿ ಮಳೆಯಿಂದ ಜಲಾವೃತಗೊಂಡಿದ್ದ ರಸ್ತೆಯಲ್ಲಿನ ಗುಂಡಿಯನ್ನು ಕಾರು ಚಾಲಕ ಅಂದಾಜಿಸುವಲ್ಲಿ ವಿಫಲಗೊಂಡಿದ್ದರಿಂದ, ಕಾರು ರಸ್ತೆ ಗುಂಡಿಯಲ್ಲಿ ಸಿಲುಕಿಕೊಂಡಿತು ಎಂದು ಅವರು ತಿಳಿಸಿದ್ದಾರೆ.

ತಮ್ಮ ಕಾರು ರಸ್ತೆ ಗುಂಡಿಯಲ್ಲಿ ಸಿಲುಕಿಕೊಂಡ ನಂತರ, ಕಾರಿನಿಂದ ಕೆಳಗಿಳಿದ ಶಿವರಾಜ್ ಸಿಂಗ್ ಚೌಹಾಣ್, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು ಎಂದು ವರದಿಯಾಗಿದೆ.

ನಂತರ, ಹೆಲಿಪ್ಯಾಡ್ ಗೆ ಸುರಕ್ಷಿತವಾಗಿ ತೆರಳಿದ ಅವರು, ರಾಂಚಿಗೆ ಹೆಲಿಕಾಪ್ಟರ್ ಮೂಲಕ ಮರಳಿದರು ಎಂದು ಉಪ ವಿಭಾಗ ಪೊಲೀಸ್ ಅಧಿಕಾರಿ ಅಜಿತ್ ಕುಮಾರ್ ಕುಜೂರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News