ಎಚ್‌ಡಿಕೆ, ಕುಟುಂಬದವರಿಂದ 71 ಎಕರೆ ಭೂಮಿ ಕಬಳಿಕೆ : ಎಸ್.ಆರ್.ಹಿರೇಮಠ ಆರೋಪ

Update: 2025-03-21 22:23 IST
ಎಚ್‌ಡಿಕೆ, ಕುಟುಂಬದವರಿಂದ 71 ಎಕರೆ ಭೂಮಿ ಕಬಳಿಕೆ : ಎಸ್.ಆರ್.ಹಿರೇಮಠ ಆರೋಪ
  • whatsapp icon

ಹುಬ್ಬಳ್ಳಿ : ಕೇತಗಾನಹಳ್ಳಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಡಿ.ಸಿ.ತಮ್ಮಣ್ಣ, ಸಂಸದ ಡಾ.ಸಿ.ಎನ್.ಮಂಜುನಾಥ ಮುಂತಾದ ಪ್ರಭಾವಶಾಲಿಗಳು 71 ಎಕರೆ ಗೋಮಾಳ ಭೂಮಿಯನ್ನು ಕಬಳಿಸಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಿಟಿಝನ್ ಫಾರ್ ಡೆಮಾಕ್ರಸಿ ಮುಖ್ಯಸ್ಥ ಎಸ್.ಆರ್.ಹಿರೇಮಠ ಒತ್ತಾಯಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇತಗಾನಹಳ್ಳಿಯಲ್ಲಿ ಕಬಳಿಸಿರುವ ಭೂಮಿ 14 ಎಕರೆ ಮಾತ್ರವಲ್ಲ, 71 ಎಕರೆ 30 ಗುಂಟೆ. ಇದರಲ್ಲಿ ಪ್ರಭಾವಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಭೂಮಿಯನ್ನು ವಶಕ್ಕೆ ಪಡೆಯಬೇಕಿದೆ ಎಂದರು.

ಇಂತಹ ಪ್ರಕರಣದ ಬಗ್ಗೆ 2014ರಲ್ಲಿ ಲೋಕಾಯುಕ್ತ ಆದೇಶದಲ್ಲಿ ರೆವಿನ್ಯೂ ಕಮಿಷನರ್ ಗೆ ಜವಾಬ್ದಾರಿ ನೀಡಿದ್ದು, ಅತಿಕ್ರಮಣದ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವ ಕಾರ್ಯವನ್ನು ಮಾಡಬೇಕೆಂದು ಆದೇಶಿಸಿದ್ದರು. ಗ್ರಾಂಟ್ ಲೆಟರ್ ಇಲ್ಲದ ಆಸ್ತಿಯನ್ನು ಅತಿಕ್ರಮಣ ಎಂದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು ಎಂಬಂತಹ ಆದೇಶವಿದೆ ಎಂದು ಅವರು ಹೇಳಿದರು.

ಡಿಸೆಂಬರ್ನಲ್ಲಿ ಕಂಟೆಂಪ್ಟ ಆಫ್ ಸಿವಿಲ್ ಕೇಸ್ ಕೂಡ ದಾಖಲು ಮಾಡಲಾಗಿದೆ. 2023ರ ಆಗಸ್ಟ್‌ನಲ್ಲಿ ಮೆಮೋ ಹಾಕಿದ್ದು, ಈಗ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. 71 ಎಕರೆ 30 ಗುಂಟೆ ಅತಿಕ್ರಮಣ ಮಾಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಎಸ್.ಆರ್.ಹಿರೇಮಠ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News