ಸುಳ್ಳು ಸುದ್ದಿ ಪ್ರಸಾರ ಆರೋಪ: ಸುಳ್ಯದ ವೆಬ್‌ ನ್ಯೂಸ್‌ ವಿರುದ್ಧ ಪ್ರಕರಣ ದಾಖಲು

Update: 2025-03-22 22:25 IST
ಸುಳ್ಳು ಸುದ್ದಿ ಪ್ರಸಾರ ಆರೋಪ:   ಸುಳ್ಯದ ವೆಬ್‌ ನ್ಯೂಸ್‌ ವಿರುದ್ಧ ಪ್ರಕರಣ ದಾಖಲು
  • whatsapp icon

ಸುಳ್ಯ: ʼನ್ಯೂಸ್ ನಾಟ್‍ಔಟ್ʼ ವೆಬ್ ನ್ಯೂಸ್ ಸಾಮಾಜಿಕ ಮಾಧ್ಯಮವೊಂದರಲ್ಲಿ ಸುಳ್ಳು ಸುದ್ದಿ ಪ್ರಸಾದ ಮಾಡಿದ ಆರೋಪದಲ್ಲಿ, ಆರೋಪಿತ ವೆಬ್‍ನ್ಯೂಸ್ ನ ವರದಿಗಾರ ಹಾಗೂ ಸಂಪಾದಕರ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾ.20ರಂದು ರಾತ್ರಿ ಸಂಪಾಜೆ ಗ್ರಾಮದ ಕಲ್ಲುಗುಂಡಿ ಬಳಿ ದನುಷ್ ಪಿ.ಎಸ್. ಎಂಬಾತನು ಸುಳ್ಯ ಕಡೆಯಿಂದ ಕಲ್ಲುಗುಂಡಿ ಕಡೆಗೆ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಸುಳ್ಯ ಕಡೆಯಿಂದ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿಗಳೊಂದಿಗೆ ತಕರಾರು ನಡೆದು ಮಾತಿನ ಚಕಮಕಿ ಉಂಟಾಗಿದ್ದು, ಈ ವಿಚಾರವನ್ನು ಸುಳ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯೂಸ್ ನಾಟ್‍ಔಟ್ ವೆಬ್ ನ್ಯೂಸ್ ಸಾಮಾಜಿಕ ಮಾದ್ಯಮವೊಂದು, ಘಟನೆಯ ಬಗ್ಗೆ ಸರಿಯಾದ ಮಾಹಿತಿ ಪಡೆಯದೇ "ಹಿಂದು ಹುಡುಗಿಯರ ಜೊತೆ ಅನ್ಯ ಕೋಮಿನ ಯುವಕರು: ಸಂಪಾಜೆ ತನಕ ತಡರಾತ್ರಿ ಕಾರನ್ನು ಬೆನ್ನಟ್ಟಿದ ಯುವಕ" ಎಂಬುದಾಗಿ ಮುಖ್ಯ ಶಿರ್ಷಿಕೆಯಲ್ಲಿ ಹಾಗೂ ವಿವರಣೆಯಲ್ಲಿ ಸಮಾಜದಲ್ಲಿ ಧರ್ಮ ಧರ್ಮಗಳ ಮಧ್ಯೆ ಕೋಮು ಸಾಮರಸ್ಯ ಕೆಡುವ ರೀತಿಯಲ್ಲಿ ಘಟನೆಯನ್ನು ಬಿಂಬಿಸಿ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿರುತ್ತಾರೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸದ್ರಿ ವೆಬ್ ನ್ಯೂಸ್‍ನ ವರದಿಗಾರ ಮತ್ತು ಸಂಪಾದಕರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News