ಕೆನಡಾ | ಲೂಧಿಯಾನಾ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ

Update: 2024-06-10 13:07 GMT

 ಯುವರಾಜ್ ಗೋಯಲ್ | PC ; Yuvraj Goyal/Facebook

ಒಟ್ಟಾವ : ಪಂಜಾಬ್ ನ ಲೂಧಿಯಾನ ಮೂಲದ 28 ವರ್ಷದ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಶುಕ್ರವಾರ ಕೆನಡಾದ ಸರ‍್ರೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮೃತರನ್ನು ಯುವರಾಜ್ ಗೋಯಲ್ ಎಂದು ಗುರುತಿಸಲಾಗಿದೆ. ಅವರು ವಿದ್ಯಾರ್ಥಿ ವೀಸಾದ ಮೇಲೆ 2019ರಲ್ಲಿ ಕೆನಡಾಗೆ ಆಗಮಿಸಿದ್ದರು ಎನ್ನಲಾಗಿದೆ.

ಈ ಘಟನೆಯು ಗುರಿ ತಪ್ಪಿ ನಡೆದಿರಬಹುದು ಎಂದು ಗೋಯಲ್ ಕುಟುಂಬದ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆನಡಾದ ಇಂಟಿಗ್ರೇಟೆಡ್ ಹೊಮಿಸೈಡ್ ಇನ್ವೆಸ್ಟಿಗೇಷನ್ ಟೀಮ್ ಪ್ರಕಾರ, ಗೋಯಲ್ ಗೆ ಯಾವುದೇ ಅಪರಾಧದ ಹಿನ್ನೆಲೆಯಿರಲಿಲ್ಲ ಎಂದು ತಿಳಿದು ಬಂದಿದೆ.

ಈ ಪ್ರಕರಣದ ಸಂಬಂಧ ಶನಿವಾರ ಮನ್ವೀರ್ ಬಸ್ರಾಮ್ (23), ಸಾಹಿಬ್ ಬಸ್ರಾ (20), ಹರ್ಕಿರತ್ ಝುಟ್ಟಿ (20) ಹಾಗೂ ಕೈಲನ್ ಪ್ರಾಂಕೋಯಿಸ್ (20) ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News