ಶಿಕ್ಷಿಸದೆ ಬಿಡುವುದಿಲ್ಲ : ಹಿಜ್ಬುಲ್ಲಾ ಎಚ್ಚರಿಕೆ

Update: 2024-04-02 18:09 GMT

ಬೇರುತ್: ಐಆರ್‍ಜಿಸಿಯ ಯೋಧರನ್ನು ಹತ್ಯೆಗೈದ ಅಪರಾಧಕ್ಕೆ ಇಸ್ರೇಲ್ ಸೂಕ್ತ ಬೆಲೆ ತೆರಲಿದೆ ಎಂದು ಲೆಬನಾನ್‍ನ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪು ಎಚ್ಚರಿಕೆ ನೀಡಿದೆ.

ನಾಯಕರನ್ನು ನಿವಾರಿಸುವುದರಿಂದ ಜನತೆಯ ಪ್ರತಿರೋಧದ ಘರ್ಜನೆಯ ಅಲೆಯನ್ನು ತಡೆಯಬಹುದು ಎಂದು ಭಾವಿಸುತ್ತಿರುವುದು ಇಸ್ರೇಲ್‍ನ ಮೂರ್ಖತನವಾಗಿದೆ. ಖಂಡಿತಾ ಈ ಅಪರಾಧಕ್ಕೆ ಶತ್ರುವನ್ನು ಶಿಕ್ಷಿಸದೆ ಮತ್ತು ಪ್ರತೀಕಾರ ಕ್ರಮ ಕೈಗೊಳ್ಳದೆ ಬಿಡಲಾಗದು ಎಂದು ಹಿಜ್ಬುಲ್ಲಾ ಹೇಳಿದೆ. ಸೋಮವಾರದ ದಾಳಿಯಲ್ಲಿ 8 ಇರಾನಿಯನ್ನರು, ಇಬ್ಬರು ಸಿರಿಯ ಪ್ರಜೆಗಳು ಮತ್ತು ಓರ್ವ ಲೆಬನಾನ್ ಪ್ರಜೆ ಸಹಿತ 11 ಮಂದಿ ಹತರಾಗಿರುವುದಾಗಿ ಮಾನವ ಹಕ್ಕುಗಳ ಸಿರಿಯನ್ ವೀಕ್ಷಕ ಏಜೆನ್ಸಿ ಹೇಳಿದೆ.

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News