ಕಲಬುರಗಿ | ಲೋಕ ಜನಶಕ್ತಿ ಪಾರ್ಟಿ ಮಜದೂರ ಸೆಲ್ ಅಧ್ಯಕ್ಷರಾಗಿ ವಿಷ್ಣು ಎನ್.ಸ್ವಾಮಿ ಆಯ್ಕೆ
Update: 2025-02-08 18:01 IST

ಕಲಬುರಗಿ : ನಗರದ ಖಾಸಗಿ ಸಭಾಗಂಣದಲಿ ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿ ಮಜದೂರ ಸೆಲ್ ರಾಷ್ಟ್ರೀಯ ಅಧ್ಯಕ್ಷ ಸುಭಾಷ್ ಬಿಹಾರಿ ಮಾರ್ಗದರ್ಶನದಲ್ಲಿ ರಾಜ್ಯಾಧ್ಯಕ್ಷ ರಾಜು ಎಸ್.ಲೇಂಗಟಿ ಅವರ ಆದೇಶದ ಮೇರೆಗೆ ಜಿಲ್ಲಾ ಅಧ್ಯಕ್ಷರಾಗಿ ವಿಷ್ಣು ಎನ್.ಸ್ವಾಮಿ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಶಿವಪುತ್ರ ಲೇಗಂಟಿ, ವರುಣ ಸಜ್ಜನ್, ನೆತೇಂದ್ರ ಕುಮಸಿ, ವಿಶಾಲ ಕಟ್ಟಿ, ಭೀಮಶಂಕರ್ ತೆಗನೂರ, ಮಹೇಶ್ ತೆಗನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.