ಅಣ್ಣಾಮಲೈ ಯಾರು ? ತಮಿಳು ನಾಡಲ್ಲಿ ಬಿಜೆಪಿ ಅಸ್ತಿತ್ವದಲ್ಲಿ ಇದೆಯೇ?: ಸುಬ್ರಮಣಿಯನ್‌ ಸ್ವಾಮಿ ಪ್ರಶ್ನೆ

Update: 2023-07-06 18:01 GMT

ಚೆನ್ನೈ: ತಮಿಳುನಾಡಿನ ವಿಮಾನ ನಿಲ್ದಾಣವೊಂದರಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರು ನೀಡಿದ್ದ ಹೇಳಿಕೆ ವ್ಯಾಪಕ ವೈರಲ್‌ ಆಗಿದೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಕುರಿತು ಪತ್ರಕರ್ತರು ಸ್ವಾಮಿ ಅವರ ಬಳಿ ಪ್ರಶ್ನೆಯೊಂದು ಕೇಳಿದಾಗ ʼಅಣ್ಣಾಮಲೈ ಯಾರುʼ ಎಂದು ಸ್ವಾಮಿ ಮರು ಪ್ರಶ್ನಿಸಿದ್ದಾರೆ.

ಅಣ್ಣಾಮಲೈ ಅವರನ್ನು ತಮಿಳುನಾಡಿನ ʼಸಿಂಗಂʼ (ಸಿಂಹ) ಎಂದು ಕರೆಯಲಾಗುತ್ತದೆ. ಅವರ ಬೆಳವಣಿಗೆಯನ್ನು ನೀವು ಹೇಗೆ ನೋಡುತ್ತೀರಿ ಎಂದು ಪತ್ರಕರ್ತರು ಪ್ರಶ್ನಿಸಿದ್ದಾರೆ. ಅದಕ್ಕೆ ʼಅಣ್ಣಾಮಲೈ ಯಾರುʼ ಎಂದು ಸ್ವಾಮಿ ಪ್ರಶ್ನಿಸಿದ್ದಾರೆ. ಅದಕ್ಕುತ್ತರವಾಗಿ, ಅವರು ತಮಿಳು ನಾಡು ಬಿಜೆಪಿ ಅಧ್ಯಕ್ಷ ಎಂದು ಪತ್ರಕರ್ತರು ಹೇಳುತ್ತಾರೆ. ತಮಿಳುನಾಡಿನಲ್ಲಿ ಬಿಜೆಪಿ ಇದೆಯಾ? ನಾನು ಎಲ್ಲೂ ಅದನ್ನು ಕಂಡಿಲ್ಲ ಎಂದು ನಗುತ್ತಲೇ ಸ್ವಾಮಿ ಉತ್ತರಿಸುತ್ತಾರೆ.

ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News